ರಾಜ್ಯ ಕಬಡ್ಡಿ ತಂಡಕ್ಕೆ ಏಕಲವ್ಯ ಪ್ರಶಸ್ತಿ ಪುರಸ್ಕೃತ, ಫಿಲೋಮಿನಾದ ಹಿರಿಯ ವಿದ್ಯಾರ್ಥಿ ಪ್ರಶಾಂತ್ ರೈ ನಾಯಕ

0

ಪುತ್ತೂರು: ಪ್ರತಿಷ್ಠಿತ ಪ್ರೊ ಕಬಡ್ಡಿಯ ಪಾಟ್ನಾ ಪೈರೇಟ್ಸ್ ತಂಡದ ನಾಯಕ, ಬ್ಯಾಂಕ್ ಆಫ್ ಬರೋಡ(ವಿಜಯಾ ಬ್ಯಾಂಕ್) ಉದ್ಯೋಗಿ, ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಪುತ್ತೂರ‍್ದ ಮುತ್ತು ಪ್ರಶಾಂತ್ ಕುಮಾರ್ ರೈ ಕೈಕಾರರವರು ಕರ್ನಾಟಕ ರಾಜ್ಯ ಕಬಡ್ಡಿ ತಂಡದ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಹರಿಯಾಣದ ದಾದ್ರಿಯಲ್ಲಿ ಜು.21 ರಿಂದ 24ರ ವರೆಗೆ ನಡೆಯುವ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವ ರಾಜ್ಯ ಕಬಡ್ಡಿ ತಂಡವನ್ನು ಪ್ರಶಾಂತ್ ರೈಯವರು ಮುನ್ನೆಡೆಸಲಿದ್ದಾರೆ. ರಾಜ್ಯ ಸರ್ಕಾರ ಕ್ರೀಡಾ ಕ್ಷೇತ್ರದಲ್ಲಿನ ವಿವಿಧ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಿದವರಿಗೆ ಕ್ರೀಡಾ ಇಲಾಖೆಯು ಪ್ರತಿ ವರ್ಷ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರಶಾಂತ್ ರೈಯವರಿಗೆ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ಫಿಲೋಮಿನಾ ಕಾಲೇಜ್‌ನಲ್ಲಿನ ಮೂರು ವರ್ಷಗಳ ಪದವಿ ವಿದ್ಯಾಭ್ಯಾಸದ ಸಂದರ್ಭದಲ್ಲಿ ಕಬಡ್ಡಿಯಲ್ಲಿ ಅಂತರ್-ಟೂರ್ನಿಯನ್ನು ಗೆಲ್ಲಿಸಿಕೊಟ್ಟ ಪ್ರಶಾಂತ್‌ರವರು, ಬಳಿಕ ಅಂತರ್-ವಿಶ್ವವಿದ್ಯಾನಿಲಯ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿ.ವಿಯನ್ನು ಪ್ರತಿನಿಧಿಸಿದ್ದರು ಮಾತ್ರವಲ್ಲದೆ ಮಂಗಳೂರು ವಿ.ವಿಯ ಕಬಡ್ಡಿ ಟೂರ್ನಿಯ ನಾಯಕರೂ ಆಗಿದ್ದರು. ದ.ಕ ಕರಾವಳಿ ತೀರದ ಕೈಕಾರ ಎಂಬಲ್ಲಿ ತಂದೆ ಕೆಎಸ್‌ಆರ್‌ಟಿಸಿ ಚಾಲಕ ದಿ.ಸೀತಾರಾಮ ರೈ ಹಾಗೂ ತಾಯಿ ದಿ.ಸತ್ಯವತಿ ರೈ ದಂಪತಿಯ ಈರ್ವರು ಗಂಡು ಮಕ್ಕಳಲ್ಲಿ ಹಿರಿಯವನಾಗಿ ಜನಿಸಿದ ಪ್ರಶಾಂತ್ ರೈಯವರು ಪ್ರಸ್ತುತ ಪತ್ನಿ ವಜ್ರೇಶ್ವರಿ, ಪುತ್ರ ಶತಾಯು ರೈ, ಪುತ್ರಿ ಶ್ರೀತ ರೈರವರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಕರ್ನಾಟಕ ತಂಡ ಇಂತಿದೆ:

ಪ್ರಶಾಂತ್ ರೈ(ನಾಯಕ), ಸುಕೇಶ್ ಹೆಗ್ಡೆ, ರಕ್ಷಿತ್ ಎಸ್, ಸಚಿನ್ ವಿಠ್ಠಲ, ಅಭಿಷೇಕ್ ಎನ್, ನರೇಂದ್ರ ಕುಮಾರ್ ಎ, ರತನ್ ಕೆ.ಎ, ಬಿ.ವೈ ಸೋಮೇಶ್ವರ್ ದರ್ಶನ್, ಆರ್ಮುಗಂ ಎಂ, ಸಚಿನ್ ಪೂವಯ್ಯ, ಮುಹಮದ್ ಆಫ್ರೀದ್, ರಾಕೇಶ್ ಗೌಡ ಕೆ.ಎ, ಮ್ಯಾನೇಜರ್:ಸಿ.ಹೊನ್ನಪ್ಪ ಗೌಡ, ಕೋಚ್:ಮೊಹಮದ್ ಇಸ್ಮಾಯಿಲ್ ಲತೀಫ್

LEAVE A REPLY

Please enter your comment!
Please enter your name here