ಪುತ್ತೂರು: ಕರ್ನಾಟಕ ಭಾರತೀಯ ವೈದ್ಯಕೀಯ ಸಂಘದ(ಐ ಎಮ್ ಎ) ವೈದ್ಯರ ದಿನದ ಪ್ರಶಸ್ತಿ ಪುರಸ್ಕೃತರಾದ ಪುತ್ತೂರು ಆದರ್ಶ ಆಸ್ಪತ್ರೆಯ ಡಾ.ಎಂ.ಕೆ ಪ್ರಸಾದ್ ಅವರಿಗೆ ಜು. 14ರಂದು ಸಾಲ್ಮರ ಕೊಟೇಚಾ ಹಾಲ್ನಲ್ಲಿ ನಡೆದ ’ಮುತ್ತಿನನಗರಿಯ ಹಿಂದು ಹೃದಯ ಸಾಮ್ರಾಟ್ ಡಾ.ಎಂ.ಕೆ ಪ್ರಸಾದ್ ಅಭಿವಂದನಾ ಸಮಾರಂಭ’ದ ಯಶಸ್ಸಿಗೆ ಮತ್ತು ದುಡಿದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ಜು. 19ರಂದು ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ಡಾ. ಎಂ.ಕೆ.ಪ್ರಸಾದ್ ಅಭಿನಂದನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ ಅವರ ಅಧ್ಯಕ್ಷತೆಯಲ್ಲಿ ಕೃತಜ್ಞತಾ ಸಭೆ ಮತ್ತು ಲೆಕ್ಕಪತ್ರ ಮಂಡನೆ ನಡೆಯಿತು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಅಭಿನಂದನಾ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಅಜಿತ್ ರೈ ಹೊಸಮನೆ, ಕೋಶಾಧಿಕಾರಿ ನ್ಯಾಯವಾದಿ ಚಿನ್ಮಯ್ ರೈ, ಮಾಧ್ಯಮ ಪ್ರಮುಖ್ ರಾಜೇಶ್ ಬನ್ನೂರು, ದಿನೇಶ್ ಪಂಜಿಗ, ವಿಶ್ವನಾಥ ಗೌಡ ಬನ್ನೂರು, ಮನೀಶ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.