ಬ್ಯಾಂಕ್ ಆಫ್ ಬರೋಡ ಪುತ್ತೂರು ಮುಖ್ಯ ಶಾಖೆಯಲ್ಲಿ ಸಂಸ್ಥಾಪಕರ ದಿನಾಚರಣೆ

0

ಪುತ್ತೂರು: ಬ್ಯಾಂಕ್ ಆಫ್ ಬರೋಡದ ಸಂಸ್ಥಾಪಕರ ದಿನಾಚರಣೆ ಪುತೂರು ಕೆ.ಪಿ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್‌ನ ಪುತ್ತೂರು ಮುಖ್ಯ ಶಾಖೆಯಲ್ಲಿ ಜು.20ರಂದು ನಡೆಯಿತು.‌

ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಡಾ. ಅಶೋಕ ಪಡಿವಾಳ ಮತ್ತು ಗಣ್ಯರು ಬ್ಯಾಂಕ್‌ನ ಸಂಸ್ಥಾಪಕ ಮಹಾರಾಜ ಸಯಾಜಿರಾವ್ ಗಾಯಕ್‌ವಾಡ್‌ರವರ ಭಾವಚಿತ್ರದ ಎದುರು ಸಂಸ್ಮರಣ ಜ್ಯೋತಿ ಬೆಳಗಿಸಿದರು. ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಬ್ಯಾಂಕ್‌ನಿಂದ ಸಿಗುವ ಉತ್ತಮ ಸೇವೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ನಾಯರ್ ಕನ್‌ಸ್ಟ್ರಕ್ಷನ್‌ನ ಸೂರಜ್ ನಾಯರ್, ಗುತ್ತಿಗೆದಾರ ಹರೀಶ್, ನ್ಯಾಯವಾದಿ ಕವನ್ ನಾಯ್ಕ್, ನಿರ್ಮಾಣ್ ಅಸೋಸಿಯೇಟ್ಸ್‌ನ ಸಚ್ಚಿದಾನಂದ್, ಪಾದುಕ ಪೂಟ್‌ವೇರ್‌ನ ಜಯರಾಜ್, ಬ್ಯಾಂಕ್ ಶಾಖೆಗಳ ಅಸಿಸ್ಟೆಂಟ್ ಮೆನೇಜರ್ ನವೀನ್ ಕುಮಾರ್ ನಾಪ ಸೇರಿದಂತೆ ಬ್ಯಾಂಕ್‌ನ ಹಲವಾರು ಮಂದಿ ಗ್ರಾಹಕರು ಉಪಸ್ಥಿತರಿದ್ದರು. ಬ್ಯಾಂಕ್ ಮುಖ್ಯ ಶಾಖಾ ಮೆನೇಜರ್ ಮಮತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಬ್ಯಾಂಕ್ ಸೌಲಭ್ಯದ ಕುರಿತು ಮಾಹಿತಿ ನೀಡಿದರು. ಅಸಿಸ್ಟೆಂಟ್ ಮೆನೇಜರ್ ಕಿರಣ್ ಸ್ವಾಗತಿಸಿದರು. ಶಾಲಿನಿ ವಂದಿಸಿದರು.

LEAVE A REPLY

Please enter your comment!
Please enter your name here