ಪುತ್ತೂರು: ಮುಂಗಾರು ಕವಿಗೋಷ್ಠಿ , ದಿ. ಚಿದಾನಂದ್ ಕಾಮತ್ ಕಾಸರಗೋಡು ಸಂಸ್ಮರಣೆ ಕಾರ್ಯಕ್ರಮ

0

ಪುತ್ತೂರು: ವಿದ್ಯಾರ್ಥಿಗಳಲ್ಲಿ ಸಾಹಿತ್ಯದೆಡೆಗೆ ಒಲವನ್ನು ಮೂಡಿಸುವ ಕಾರ್ಯವಾಗಬೇಕು ಈ ನಿಟ್ಟಿನಲ್ಲಿ ಆಯೋಜನೆಗೊಂಡ ಕಾರ್ಯಕ್ರಮ ಯಶಸ್ಸನ್ನು ಕಂಡಿರುವುದು ಸತ್ಯ. ಚಿದಾನಂದ ಕಾಮತ್‌ರವರ ಒಡನಾಡಿಯಾಗಿದ್ದು ಈ ಕಾರ್ಯಕ್ರಮ ಭಾಗವಹಿಸಿದ್ದು ತುಂಬಾ ಖುಷಿಯ ವಿಚಾರ ಎಂದು ಮಧು ಪ್ರಪಂಚ ಪತ್ರಿಕೆಯ ಸಂಪಾದಕ ಮತ್ತು ನಿವೃತ್ತ ಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು.

ಅವರು ಚಿಗುರೆಲೆ ಸಾಹಿತ್ಯ ಬಳಗ ಮತ್ತು ಸ್ಮರಣೀಯ ಚಿದಾನಂದ ಕಾಮತ್ ಕಾಸರಗೋಡು ಅಭಿಮಾನಿ ಬಳಗದ ಜಂಟಿ ಆಶ್ರಯದಲ್ಲಿ ಸುದಾನಶಾಲೆ ಮಂಜಲ್ಪಡ್ಪುನಲ್ಲಿ ನಡೆದ ಮುಂಗಾರು ಕವಿಗೋಷ್ಠಿ ಮತ್ತು ದಿ ಚಿದಾನಂದ್ ಕಾಮತ್ ಕಾಸರಗೋಡು ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಕೆಎಂಸಿಯ ನಿವೃತ್ತ ಉದ್ಯೋಗಿ ಸುದರ್ಶನ್ ಮುರ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರಸೂಸಲು ಪ್ರೋತ್ಸಾಹ ಅಗತ್ಯ. ಮಕ್ಕಳಿಂದ ಹಿಡಿದು ಹಿರಿಯರನ್ನು ಪ್ರೋತ್ಸಾಹಿಸುವಂತಹ ಚಿದಾನಂದ್ ಕಾಮತ್ ಮಾಡುತ್ತಿದ್ದರು. ಗಡಿನಾಡಿನಲ್ಲಿ ಹುಟ್ಟಿ ಬೆಳೆದದ್ದಾರೂ ಕೂಡ ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಅಭಿಮಾನ ಮೆಚ್ಚಬೇಕು. ಅವರು ಯುವ ಲೇಖಕರು ಹಾಗೂ ಕವಿಗಳಿಗೆ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದರೆ ತಪ್ಪಾಗಲಾರದು ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲಿ ತೊಡಕುಗಳು ಇದ್ದೇ ಇರುತ್ತದೆ. ಟೀಕಿಸುವವರು, ಟಿಪ್ಪಣಿಗಳನ್ನು ಹೇಳುವವರು ಕೂಡ ಇರುತ್ತಾರೆ. ಯಶಸ್ಸನ್ನು ಕುಂಠಿತಗೊಳಿಸುವ ಹಾದಿಯ ಬಗ್ಗೆ ತಲೆಕೆಡಿಸಕೊಳ್ಳದೆ ಗುರಿಯತ್ತ ಯುವ ಪ್ರತಿಭೆಗಳು ಹೆಜ್ಜೆಯಿಡಬೇಕು ಎಂದರು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಸುದಾನ ಶಾಲೆಯ ಸಂಚಾಲಕ ರೆ.ಫಾ. ವಿಜಯ್ ಹಾರ್ವಿನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿಗುರೆಲೆ ವತಿಯಿಂದ ವಿಜಯ ಹಾರ್ವಿನ್‌ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಬಳಿಕ ನಡೆದ ಕವಿಗೋಷ್ಠಿಗೆ ವಿಶೇಷ ಚೇತನ ಬಾಲಕ ರಕ್ಷಿತ್ ಗೋಳ್ತಮಜಲು ಚಾಲನೆ ನೀಡಿದರು. ಕವಿಗೋಷ್ಠಿಯಲ್ಲಿ ಲಿಖಿತ ಕೋಟ್ಯಾನ್, ಪುನೀತ್ ಕುಮಾರ್, ರಹಾನ, ಮೋಕ್ಷಿತಾ ಮಾಯಿಲಕೊಚ್ಚಿ, ಮಹಮ್ಮದ್ ಸಿಂಸಾರುಲ್ ಹಕ್, ಧನ್ವಿತಾ ಕಾರಂತ್, ಶ್ರೀಕಲಾ ಕಾರಂತ್, ಆಶಾ ಅಡೂರ್, ಗುಣಾಜೆ ರಾಮಚಂದ್ರ ಭಟ್, ರಮ್ಯ ಎನ್, ಬೃಂದಾ ಪಿ ಮುಕ್ಕೂರು, ಮಲ್ಲಿಕಾ ಜೆ ರೈ, ನವೀನ್ ಕುಲಾಲ್ ಚಿಪ್ಪಾರು, ಶಿವಪ್ರಸಾದ್ ಕೊಕ್ಕಡ, ರಶ್ಮಿ ಸನಿಲ್. ಮಂಗಳೂರು, ಶಾಂತಾ ಪುತ್ತೂರು, ಶ್ರೇಯಾ ಮಿಂಚಿನಡ್ಕ, ಶ್ರೇಯಾ ಸಿ ಪಿ ಕಡಬ, ಅನನ್ಯ. ಹೆಚ್. ಸುಬ್ರಹ್ಮಣ್ಯ, ಶಿರ್ಷಿತಾ ಕಾರಂತ್, ವಿಂಧ್ಯಾ. ಎಸ್. ರೈ., ಉಮಾಶಂಕರಿ ಮರಿಕೆ, ಪರಿಮಳ, ಬಾಲಕೃಷ್ಣ ಕೇಪುಳು, ಪ್ರಭಾಕರ್ ಭಟ್. ಟಿ. ಪೋಳ್ಯ, ರೇಖಾ ಸುದೇಶ್ ರಾವ್, ಜಯಾನಂದ ಪೆರಾಜೆ, ನಾರಾಯಣ ನಾಯ್ಕ ಕುದುಕೋಳಿ, ಪಂಕಜಾ ಕೆ ಮುಡಿಪು, ಆಶಾ ಮಯ್ಯ. ಪುತ್ತೂರು, ಆಶಾ ಅಡೂರ್, ಆನಂದ ರೈ ಅಡ್ಕಸ್ಥಳ,ದೀಪ್ತಿ ಅಡ್ಡಂತ್ತಡ್ಕ, ಯಾನ್ವಿ ಡಿ. ಪೂಜಾರಿ, ಸುಜಯ ಎಸ್, ಗೀತಾ ಲಕ್ಷ್ಮೀಶ್, ಶಶಿಧರ್ ಏಮಾಜೆ ಕವನ ವಾಚಿಸಿದರು.ಕವಿಗೋಷ್ಠಿ ಅಧ್ಯಕ್ಷರಾದ ಗೀತಾ ಲಕ್ಷ್ಮೀಶ್ ಮುಂಗಾರು ಕವಿಗೋಷ್ಠಿಯ ಅದೃಷ್ಟವಂತ ಕವಿಯಾಗಿ ಆಯ್ಕೆಯಾದರು. ದುರ್ಗಾಶ್ರೀ ಉರ್ಲಾಂಡಿ ಚೀಟಿ ಎತ್ತಿ ಅದೃಷ್ಟವಂತರ ಆಯ್ಕೆ ಮಾಡಿದರು.

ಕವಿಗೋಷ್ಠಿಯ ಸಂಚಾಲಕಿ ಚೈತ್ರ ಮಾಯಿಲಕೊಚ್ಚಿ, ಕಾರ್ಯಕ್ರಮ ಸಂಯೋಜಕ ನಾರಾಯಣ ಕುಂಬ್ರ ಉಪಸ್ಥಿತರಿದ್ದರು. ಪ್ರತೀಕ್ಷಾ ಆರ್ ಕಾವು ಮತ್ತು ಸಮ್ಯಕ್ತ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಅಪೂರ್ವ ಕಾರಂತ್ ಪ್ರಾರ್ಥಿಸಿದರು. ಮಂಜುಶ್ರೀ ನಲ್ಕ ಸ್ವಾಗತಿಸಿ, ಅನ್ನಪೂರ್ಣ ಎನ್. ಕೆ. ವಂದಿಸಿದರು. ಸುಪ್ರೀತಾ ಚರಣ್ ಪಾಲಪ್ಪೆ ಕಡಬ ಕಾರ್ಯಕ್ರಮ ನಿರೂಪಿಸಿದರು. ಚಿಗುರೆಲೆ ಬಳಗದ ಚಂದ್ರಮೌಳಿ ಸಹಕರಿಸಿದರು.

LEAVE A REPLY

Please enter your comment!
Please enter your name here