ಪುತ್ತೂರು: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿರುವ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ತುಷಾರ್ ಬೊಳ್ಳಾಡಿಯವರು ಉತ್ತೀರ್ಣಗೊಂಡಿದ್ದಾರೆ. ಇವರು ಮಂಗಳೂರಿನ ಸಿಎ ಚಂದ್ರಕಾಂತ್ ಶೆಣೈ ಕೆ.ಯವರಿಂದ ತರಬೇತಿ ಪಡೆದುಕೊಂಡಿದ್ದರು. ಇವರು ಕುಂಬ್ರ ಒಳಮೊಗ್ರು ಗ್ರಾಮದ ಬೊಳ್ಳಾಡಿ ರಾಮಯ್ಯ ಗೌಡ ಮತ್ತು ವಸಂತಿಯವರ ಪುತ್ರರಾಗಿದ್ದಾರೆ.