ಸವಣೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ಕಿರಣ್ ಶೆಟ್ಟಿ ರವರಿಗೆ ಶ್ರದ್ಧಾಂಜಲಿ

0

ಸವಣೂರು : ಇತ್ತೀಚೆಗೆ ನಿಧನರಾದ ಬೊಳುವಾರು ಸೋಲಾರ್ ಮ್ಯಾಟ್ರಿಕ್ಸ್ ಮಾಲಕ ಕಿರಣ್ ಶೆಟ್ಟಿ ಅವರಿಗೆ ಸವಣೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ಜು.21ರಂದು ಶ್ರದ್ಧಾಂಜಲಿ ಅರ್ಪಿಸಲಾಯಿತು.

ಗ್ರಾ.ಪಂ.ವ್ಯಾಪ್ತಿಯಲ್ಲಿ ಸೋಲಾರ್ ಅಳವಡಿಸಿ ಅತ್ಯುನ್ನತ ಸೇವೆ ನೀಡಿದ್ದು, ಅಕಾಲಿಕವಾಗಿ ನಿಧನರಾದ ಕಿರಣ್ ಶೆಟ್ಟಿ ಅವರ ಆತ್ಮಕ್ಕೆ ಭಗವಂತ ಶಾಂತಿ ಕರುಣಿಸಲಿ ಎಂದು ಮೌನ ಪ್ರಾರ್ಥನೆ ಮಾಡಲಾಯಿತು.

ಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಪಿಡಿಓ ಎ.ಮನ್ಮಥ, ಸದಸ್ಯರಾದ ಅಬ್ದುಲ್ ರಝಾಕ್, ಚೆನ್ನು, ಚೇತನಾ, ಇಂದಿರಾ ಬೇರಿಕೆ, ಯಶೋಧಾ, ಆಯಿಶತ್ ಸಬೀನಾ, ಸುಂದರಿ ಬಿ ಎಸ್, ವಿನೋದಾ ರೈ, ಚಂದ್ರಾವತಿ ಸುಣ್ಣಾಜೆ, ಸತೀಶ್ ಅಂಗಡಿಮೂಲೆ, ಬಾಬು ಎನ್, ತೀರ್ಥರಾಮ ಕೆಡೆಂಜಿ, ಹರೀಶ್ ಕೆಜಿ, ತಾರಾನಾಥ ಸುವರ್ಣ, ಭರತ್ ರೈ , ಎಂ.ಎ.ರಫೀಕ್, ಸಿಬ್ಬಂದಿ ಪ್ರಮೋದ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here