ಪುತ್ತೂರು: ರೇಡಿಯೋ ಪಾಂಚಜನ್ಯ 90.8 ಎಫ್.ಎಂ. ಹಾಗೂ ಇನ್ನರ್ ವೀಲ್ ಸಹಯೋಗದಲ್ಲಿ ಜು.15ರಂದು ನಾಗರಪಂಚಮಿ ಹಬ್ಬದ ಪ್ರಯುಕ್ತ ನಡೆದ ಭಕ್ತಿಗೀತೆ ಹಾಗೂ ಸ್ವರಚಿತ ಕವನ ವಾಚನ ಸ್ಪರ್ಧೆಯಲ್ಲಿ ನೆಹರುನಗರದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ (ಸಿಬಿಎಸ್ಇ)ಯ 4ನೇ ತರಗತಿ ವಿದ್ಯಾರ್ಥಿನಿ ಆದ್ಯಲಕ್ಷ್ಮೀ ಕೆ. ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಪುತ್ತೂರಿನ ಉಮಾಮಹೇಶ್ವರ ಸಂಗೀತ ಶಾಲೆಯ ವಿದುಷಿ ವಿದ್ಯಾ ಈಶ್ವರಚಂದ್ರರವರ ಶಿಷ್ಯೆಯಾಗಿರುವ ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ಅನ್ನಪೂರ್ಣ ಪಿ.ಜಿ. ಹಾಗೂ ಬೊಳುವಾರಿನಲ್ಲಿರುವ ಅಕ್ಷಯ ಕಂಪ್ಯೂಟರ್ಸ್ ಮಾಲಕ ಕೃಷ್ಣಪ್ರಸಾದ್ ದಂಪತಿ ಪುತ್ರಿ.