ಕೊಣಾಲು ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಶಿಲೆಕಲ್ಲು ಜೋಡಣೆ ಮುಹೂರ್ತ

0

ನೆಲ್ಯಾಡಿ: ಜೀರ್ಣೋದ್ದಾರಗೊಳ್ಳುತ್ತಿರುವ ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶಿಲೆಕಲ್ಲು ಜೋಡಣೆ ಮುಹೂರ್ತ ಜು.21ರಂದು ಬೆಳಿಗ್ಗೆ ನಡೆಯಿತು.

ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯರವರು ಪೂಜಾ ವಿಽವಿಧಾನ ನೆರವೇರಿಸಿ ಮುಹೂರ್ತ ನೆರವೇರಿಸಿದರು. ಈ ಸಂದರ್ಭದಲ್ಲಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಾನಂದ ಕಾರಂತ, ಗೌರವಾಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಉಪಾಧ್ಯಕ್ಷರಾದ ನೋಣಯ್ಯ ಪೂಜಾರಿ ಅಂಬರ್ಜೆ, ಸದಾನಂದ ಗೌಡ ಡೆಬ್ಬೇಲಿ, ನೋಣಯ್ಯ ಗೌಡ ಡೆಬ್ಬೇಲಿ, ಜೊತೆ ಕಾರ್ಯದರ್ಶಿ ಲೋಕೇಶ್ ಅಗರ್ತ, ವಿವಿಧ ಸಮಿತಿಗಳ ಮುಖಂಡರಾದ ರಾಜಶೇಖರ ಹೊಸಮನೆ, ಕೊರಗಪ್ಪ ಸಾಲ್ಯಾನ್ ಶಿವಾರು, ಸುಂದರ ಶೆಟ್ಟಿ ಪುರ, ಪ್ರವೀಣ್ ಭಂಡಾರಿ ಅಲಸಿನಕಟ್ಟೆ, ವಿಶ್ವನಾಥ ಮಡಿವಾಳ ಅಗರ್ತ, ಪ್ರಕಾಶ್ ಕೊರೊಂಬೊಟ್ಟು, ರುಕ್ಮಯ ಗೌಡ ತಿರ್ಲೆ, ಶ್ರೀಧರ ಗೌಡ ತಿರ್ಲೆ, ತಿಮ್ಮಪ್ಪ ತಿರ್ಲೆ, ನೀಲಮ್ಮ ತಿರ್ಲೆ, ಶಾಂತ ಸರಳಾಯ, ಪ್ರಸಾದ್, ರೋಹಿನಾಥ ಪಾತ್ರಮಾಡಿ, ರಾಮಯ್ಯ ಗೌಡ ತಿರ್ಲೆ ಮತ್ತಿತರರು ಉಪಸ್ಥಿತರಿದ್ದರು. ಶಿಲ್ಪಿ ವಿಜಯ ಪುಳಿತ್ತಡಿ, ಉಮೇಶ್ ಬೆದ್ರೋಡಿ, ಲತೀಶ್ ಪೆರಿಯಡ್ಕ ಹಾಗೂ ಕಿರಣ್ ಪುಳಿತ್ತಡಿಯವರು ಶಿಲೆಕಲ್ಲು ಜೋಡಣೆ ಕೆಲಸ ಆರಂಭಿಸಿದರು.

LEAVE A REPLY

Please enter your comment!
Please enter your name here