ಕೆಎಸ್‌ಆರ್‌ಟಿಸಿ ಟಿ.ಸಿ ಸಿ.ಸತ್ಯಶಂಕರ ಭಟ್‌ರಿಗೆ ಬೆಳ್ಳಾರೆ ರೋಟರಿ ಕ್ಲಬ್‌ನಿಂದ ‘ಶಿಸ್ತುಬದ್ಧ ಸಿಬ್ಬಂದಿ’ ಪ್ರಶಸ್ತಿ

0

ಪುತ್ತೂರು:ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿ.ಸತ್ಯಶಂಕರ ಭಟ್ ಕಜೆ ಅವರಿಗೆ ಬೆಳ್ಳಾರೆ ರೋಟರಿ ಕ್ಲಬ್ ಟೌನ್ ವತಿಯಿಂದ ‘ಶಿಸ್ತುಬದ್ದ ಸಿಬ್ಬಂದಿ’ ಪ್ರಶಸ್ತಿ ನೀಡಿ ಗೌರವಿಸಿದೆ.

ಇತ್ತೀಚೆಗೆ ಬೆಳ್ಳಾರೆಯಲ್ಲಿ ನಡೆದ ರೋಟರಿ ಕ್ಲಬ್ ಬೆಳ್ಳಾರೆ ಟೌನ್‌ನ 2022-23ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸತ್ಯಶಂಕರ್ ಭಟ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ರೋಟರಿ ಕ್ಲಬ್ ಅಧ್ಯಕ್ಷ ಕೇಶವಮೂರ್ತಿ, ಕಾರ್ಯದರ್ಶಿ ರವೀಂದ್ರ ಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಸತ್ಯಶಂಕರ್ ಭಟ್ ಅವರು 2021ರಲ್ಲಿ ಸ್ವಾತಂತ್ರ್ಯೋತ್ಸವ ಸಂದರ್ಭ ‘ಜನಸ್ನೇಹಿ ಸಿಬ್ಬಂದಿ’ಯಾಗಿ ಸುದ್ದಿ ಬಿಡುಗಡೆ ಮೂಲಕ ಆಯ್ಕೆಗೊಂಡಿದ್ದರು. ಇವರು ಪುತ್ತೂರು ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಉಪಾಧ್ಯಕ್ಷರಾಗಿದ್ದಾರೆ.

LEAVE A REPLY

Please enter your comment!
Please enter your name here