ಪುತ್ತೂರು: ಇತ್ತೀಚೆಗೆ ಸರಕಾರಿ ಪ್ರೌಢಶಾಲೆ ಕೊಂಬೆಟ್ಟು ಇಲ್ಲಿ ನಡೆದ ಪುತ್ತೂರು ವಲಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು ಇಲ್ಲಿಯ ನಾಲ್ವರು ವಿದ್ಯಾರ್ಥಿನಿಯರು ಜುಲೈ 25 ರಂದು ಕೊಡಿಪ್ಪಾಡಿ ಪ್ರಾಥಮಿಕ ಶಾಲೆಯಲ್ಲಿ ನಡೆಯುವ ತಾಲೂಕು ಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
6ನೇ ತರಗತಿಯ ವಿದ್ಯಾಲಕ್ಷ್ಮಿ (ಉಪ್ಪಿನಂಗಡಿಯ ಮೋನಪ್ಪ-ಗಿರಿಜ ದಂಪತಿಯ ಪುತ್ರಿ), ೭ನೇ ತರಗತಿಯ ಚಾರ್ವಿ (ಸುಳ್ಯದ ಬಾಬಣ್ಣ-ಸುಲೋಚನ ಪುತ್ರಿ), ೮ನೇ ತರಗತಿಯ ರಶ್ಮಿತಾ (ಉಪ್ಪಿನಂಗಡಿಯ ಗೋಪಾಲ-ಗೀತಾ ದಂಪತಿ ಪುತ್ರಿ), ೧೦ನೇ ತರಗತಿಯ ಚೈತಾಲಿ (ವಿಟ್ಲದ ವಾಸಪ್ಪ-ದಿವ್ಯಜ್ಯೋತಿ ದಂಪತಿ ಪುತ್ರಿ) ಈ ಸ್ಪರ್ಧಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸದಾಶಿವ ಡಿ. ಇವರು ಮಾರ್ಗದರ್ಶನ ನೀಡಿರುತ್ತಾರೆ. ಸಂಸ್ಥೆಯ ಪ್ರಾಂಶುಪಾಲ ಸುಬ್ರಹ್ಮಣ್ಯ ನಾಯಕ್ ಅಭಿನಂದಿಸಿದ್ದಾರೆ.