ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಸರಿ ದಿನ ಆಚರಣೆ

0

ಪುತ್ತೂರು:ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲದಲ್ಲಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಕೇಸರಿ ದಿನವನ್ನು ಆಚರಿಸಲಾಯಿತು. ಶಾಲೆಯ ಪುಟಾಣಿಗಳು ಕೇಸರಿ ಬಣ್ಣದ ಉಡುಗೆಯನ್ನು ತೊಟ್ಟು ಸಂಭ್ರಮದಿಂದ ಮಿನುಗಿದರು. ತರಗತಿಗಳನ್ನು ಕೇಸರಿ ಬಣ್ಣದ ವಸ್ತುಗಳಿಂದ ಸಿಂಗರಿಸಲಾಗಿತ್ತು.

 

ಶಿಕ್ಷಕಿಯರು ಮಕ್ಕಳಿಗೆ ಕೇಸರಿ ಬಣ್ಣದ ಹಲವು ವಸ್ತುಗಳ ಪರಿಚಯ ಮಾಡಿ, ಕೇಸರಿ ಬಣ್ಣದ ಮಹತ್ವದ ಬಗ್ಗೆ ತಿಳಿಸಿದರು. ಮಕ್ಕಳಿಗೆ ಶಿಕ್ಷಕಿಯರು ಕೇಸರಿ ಬಣ್ಣಕ್ಕೆ ಸಂಬಂಧಪಟ್ಟ ಚಟುವಟಿಕೆಗಳನ್ನು ಆಯೋಜಿಸಿದ್ದರು. ಕೇಸರಿ ಬಣ್ಣವುಉತ್ಸಾಹ, ಭರವಸೆ ಮತ್ತುಧೈರ್ಯದ ಪ್ರತೀಕವಾಗಿದೆ.


ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ.ಕೆ.ಎಂ.ಕೃಷ್ಣ ಭಟ್ ಶಾಲೆಗೆ ಭೇಟಿ ನೀಡಿಕೇಸರಿ ದಿನದ ಆಚರಣೆಯ ಬಗ್ಗೆ ಪ್ರಶಂಸನೀಯ ನುಡಿಗಳ್ನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ.ಶಿವಪ್ರಕಾಶ್.ಎಂ, ಸಂಚಾಲಕ ರವಿನಾರಾಯಣ.ಎಂ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರು ಸಹಕರಿಸಿದರು.

 

 

LEAVE A REPLY

Please enter your comment!
Please enter your name here