ವಿಟ್ಲ: ಯುವತಿಯ ಫೇಸ್ ಬುಕ್ ಗೆಳೆಯನ ಅರಸಿ ಹೊರಟ ಮನೆಯವರಿಗೆ ಸಿಕ್ಕಿದ್ದು ಮಂಗಳಮುಖಿ..?

0

ವಿಟ್ಲ: ಯುವತಿಯೋರ್ವರಿಗೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯೊರ್ವರ ಜಾಡುಹಿಡಿಯ ಹೊರಟ ಮನೆಯವರಿಗೆ, ಮಗಳೊಂದಿಗೆ ಸ್ನೇಹಾಚಾರ ಮಾಡಿರುವುದು ಮಂಗಳಮುಖಿ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದ ಬಗ್ಗೆ ವರದಿಯಾಗಿದೆ.

ವಿಟ್ಲ ಮೂಲದ ಯುವತಿಯೋರ್ವರಿಗೆ ಫೇಸ್ ಬುಕ್ ಮೂಲಕ ಪರಿಚಯವಾದ ಜ್ಯೋತಿ ಎಂಬಾಕೆ ಪ್ರದೀಪ ಎಂಬ ಹೆಸರಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ನಂಬಿಸಿ ಗಂಡಸಿನ ಧ್ವನಿಯಲ್ಲಿ ಮಾತನಾಡಿದ್ದರು. ಕಳೆದ ಐದು ವರ್ಷಗಳಿಂದ ಅವರೊಂದಿಗೆ ಸ್ನೇಹಾಚಾರ ನಡೆಯುತ್ತಿತ್ತು, ಮದುವೆ ವಿಚಾರದಲ್ಲಿ ಹಾಗೂ ಆ ಯವಕನ ಸ್ನೇಹಾಚಾರದ ಕುರಿತಾಗಿ ಯುವತಿಗೆ ಹಾಗೂ ಮನೆಯವರಿಗೆ ಆಗಾಗ ಜಗಳವಾಗುತ್ತಿತ್ತು. ಯುವತಿಯ ಈ ವರ್ತನೆಯಿಂದ ಬೇಸತ್ತ ಆಕೆಯ ತಾಯಿ ತನ್ನ ಪರಿಚಯದ ವಕೀಲರೋರ್ವರಿಗೆ, ತನ್ನ ಮಗಳ ವರ್ತನೆ ಬಗ್ಗೆ ತಿಳಿಸಿದ್ದರು. ಬಳಿಕ ಮನೆಯವರೊಂದಿಗೆ ಆ ವ್ಯಕ್ತಿಯ ಜಾಡು ಹಿಡಿಯ ಹೊರಟ ವಕೀಲೆ ಈ ಬಗ್ಗೆ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆ ಬಳಿಕ ಶಂಕರನಾರಾಯಣ ಪೊಲೀಸ್ ಠಾಣೆಗೆ ತೆರಳಿ ಅಲ್ಲಿನ ಪೊಲೀಸರಿಗೆ ಮಾಹಿತಿ ನೀಡಿ ಆ ವ್ಯಕ್ತಿಯ ಜಾಡು ಹಿಡಿಯುವಲ್ಲಿ ಸಫಲರಾದರು. ಈ ವೇಳೆ ಯುವತಿಯೊಂದಿಗೆ ಧ್ವನಿ ಬದಲಿಸಿ ಮಾತನಾಡುತ್ತಿರುವುದು ಓರ್ವ ಮಂಗಳಮುಖಿ ಎನ್ನುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಆ ಮಂಗಳಮುಖಿಗೆ ಯುವತಿಯ ತಂಟೆಗೆ ಬಾರದಂತೆ ಎಂಚ್ಚರಿಕೆ ನೀಡಿ ಮರಳಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಯುವತಿಯ ಐದು ವರ್ಷಗಳ ಪ್ರೇಮ ಪ್ರಕರಣ ಮನೆಯವರ ಮಧ್ಯಪ್ರವೇಶದಿಂದ ಅಂತ್ಯಕಂಡಿದೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here