ಶಟಲ್ ಬ್ಯಾಡ್ಮಿಂಟನ್: ವಿವೇಕಾನಂದ ಆಂಗ್ಲ ಮಾಧ್ಯಮ  ಶಾಲೆಯ ಸಮನ್ವಿತಾ ಕೆ, ಡಿಹರ್ಷ ಜಿಲ್ಲಾಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪುತ್ತೂರು ಇದರ ಆಶ್ರಯದಲ್ಲಿ ಜುಲೈ 19ರಂದು ದರ್ಬೆಯ ಆಫೀಸರ್ ಕ್ಲಬ್ ಪುತ್ತೂರು ಇಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ 14 ವಯೋಮಾನದ  ಬಾಲಕಿಯರ ವಿಭಾಗದ ಆಯ್ಕೆ ಪ್ರಕ್ರಿಯೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ  ಶಾಲೆಯ 8ನೇ ತರಗತಿಯ  ಸಮನ್ವಿತಾ ಕೆ (ವಿನ್ಯಾಸ್ ಕನ್‍ಸ್ಟ್ರಕ್ಷಷನ್ ಮಾಲಕ ಬಪ್ಪಳಿಗೆಯ ಕಿಶೋರ್ ಕುಮಾರ್ ಮತ್ತು ರೂಪಶ್ರೀ ಕೆ ರವರ ಪುತ್ರಿ), ಡಿಹರ್ಷ (ಚಿಕ್ಕ ಪುತ್ತೂರಿನ ಎಸ್ ಶಿವಕುಮಾರ್ ಮತ್ತು ಎಸ್ ಪೋನ್ನಿ ರವರ ಪುತ್ರಿ) ಆಯ್ಕೆಯಾಗಿದ್ದಾರೆ. ಇವರು ಜುಲೈ 23ರಂದು ಸರ್ಕಾರಿ ಪ್ರೌಢಶಾಲೆ ನ್ಯೂ ಪಡ್ಪು ಇಲ್ಲಿ ನಡೆಯುವ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕನ್ನು ಪ್ರತಿನಿಧಿಸಲಿರುವರು ಎಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here