ಉಪ್ಪಿನಂಗಡಿ: ಸುಳ್ಯದ ಜಾಲ್ಸೂರು ವಿನೋಬನಗರದಲ್ಲಿರುವ ವಿವೇಕಾನಂದ ಸ್ಕೂಲ್ನಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಶಿಕಾ ಎಮ್. ದ್ವಿತೀಯ ಸ್ಥಾನ ಹಾಗೂ ವಿದ್ಯಾರ್ಥಿ ಆಶ್ರಯ ದತ್ತ ನಾಲ್ಕನೇ ಸ್ಥಾನವನ್ನು ಪಡೆದು ರಾಜ್ಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ಎಚ್.ಕೆ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಶಿಕಾ ಎಮ್. ಬಾರ್ಯದ ಇ. ಮನೋಹರ್ ಮತ್ತು ಸವಿತಾ ಎಮ್. ದಂಪತಿ ಪುತ್ರಿ ಹಾಗೂ ಆಶ್ರಯ ದತ್ತ ಇವರು ಪೆರಾಬೆಯ ಕುಮಾರ ಸುಬ್ರಹ್ಮಣ್ಯ ಕೆ.ಜಿ. ಮತ್ತು ದಿವ್ಯಜ್ಯೋತಿ ದಂಪತಿ ಪುತ್ರರಾಗಿರುತ್ತಾರೆ.