ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿರುವ ದೇವಿ ಗುಡಿಯಲ್ಲಿ ಆಷಾಡ/ ಕರ್ಕಾಟಕ ಆಟಿ ತಿಂಗಳ ಪ್ರತೀ ಶುಕ್ರವಾರದಂದು ರಾತ್ರಿ ಗಂಟೆ 7.30ರಿಂದ ವಿಶೇಷ ದುರ್ಗಾಪೂಜೆ ಆರಂಭಗೊಂಡಿದ್ದು, ಜು. 22ರಂದು ಪೂಜೆ ನಡೆಯಿತು.
ಸಂಜೆ ನಡೆದ ವಿಶೇಷ ದುರ್ಗಾಪೂಜೆಯ ಬಳಿಕ ಅನ್ನಪ್ರಸಾದ ನಡೆಯಿತು. ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮದಾಸ್ ಗೌಡ, ರಾಮಚಂದ್ರ ಕಾಮತ್, ಶೇಖರ್ ನಾರಾವಿ, ಡಾ.ಸುಧಾ ಎಸ್ ರಾವ್, ವೀಣಾ ಬಿ.ಕೆ, ಬಿ.ಐತ್ತಪ್ಪ ನಾಯ್ಕ್, ರವೀಂದ್ರನಾಥ ರೈ ಬಳ್ಳಮಜಲು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.