ವಿಟ್ಲ: ದ. ಕ. ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ಸ್ಥಾಪಕಾಧ್ಯಕ್ಷ ಬಿ. ಕೆ. ಸೇಸಪ್ಪ ಬೆದ್ರಕಾಡು ರವರ ತಂದೆ ದಿ. ಕುಟ್ಟಿ ಹಾಗೂ ತಾಯಿ ಗಿರಿಜಾರವರ ನೆನಪಿಗಾಗಿ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಇದೀಗ ಕಷ್ಟದಲ್ಲಿರುವ ಸುಕುಮಾರ ನಾಯ್ಕರವರ ಪತ್ನಿ ಅನಿತಾ, ಸುಶೀಲ ನೆಲ್ಲಿಗುಡ್ಡೆ ಮತ್ತು ಶೀನ ಮುಳಿಯರವರ ಪತ್ನಿ ವಿಮಲ ರವರಿಗೆ ಸಂಘದ ಕಛೇರಿಯಲ್ಲಿ ತಲಾ 75ಕಿಲೋ ಅಕ್ಕಿಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಯು. ವಿಟ್ಲ ಮತ್ತು ಮಾಜಿ ಅಧ್ಯಕ್ಷ ಗಣೇಶ್ ಸೀಗೆಬಲ್ಲೆ ಉಪಸ್ಥಿತರಿದ್ದರು.