ಮಾಣಿ : ಸರ್ಕಾರಿ ಶಾಲೆಯನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎನ್ನುವ ದೃಷ್ಟಿಯಿಂದ, ಶಾಲೆಯ ಉನ್ನತಿಗಾಗಿ ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ ಯುವವಾಹಿನಿ ಮಾಣಿ ಘಟಕದ ವತಿಯಿಂದ ಸ್ಪಂದನೆ ಯೋಜನೆಯ ಮೂಲಕ ಮಾಣಿ ಶಾಲೆಗೆ ನೀರು ಸಂರಕ್ಷಣಾ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಮತ್ತು ಎಸ್.ಡಿ.ಎಮ್.ಸಿ ಸದಸ್ಯರ ಸಮ್ಮುಖದಲ್ಲಿ ಯಂತ್ರವನ್ನು ಹಸ್ತಾಂತರಿಸಲಾಯಿತು. ಘಟಕದ ಅಧ್ಯಕ್ಷ ಜಯಂತ ಬರಿಮಾರು, ಗೌರವ ಸಲಹೆಗಾರ ಯಶೋಧರ ಮಾಣಿ, ಉಪಾಧ್ಯಕ್ಷ ನಾಗೇಶ್ ಕೊಂಕಣಪದವು, ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ ಬಾಕಿಲ, ಕೋಶಾಧಿಕಾರಿ ರಾಜೇಶ್, ಮಾಣಿ ಗ್ರಾಮದ ಸಂಘಟನಾ ಕಾರ್ಯದರ್ಶಿ ಸುಜಿತ್ ಅಂಚನ್, ಎಸ್.ಡಿ.ಎಮ್.ಸಿ ಅಧ್ಯಕ್ಷ ಹರೀಶ್ ಮಾಣಿ ಹಾಗೂ ಸದಸ್ಯರು, ಶಾಲೆಯ ಶಿಕ್ಷಕವೃಂದವರು ಉಪಸ್ಥಿತರಿದ್ದರು.