ಸಾಂಸ್ಕೃತಿಕ ಕಲಾಕೇಂದ್ರದ ಸಂಸ್ಥಾಪಕ ದಿ.ಚಿದಾನಂದ ಕಾಮತ್ ಪುಣ್ಯಸ್ಮರಣೆ

0

ಪುತ್ತೂರು : ಸಾಂಸ್ಕೃತಿಕ ಕಲಾಕೇಂದ್ರ ಬೊಳುವಾರು ಇದರ ಸಂಸ್ಥಾಪಕ ದಿ.ಚಿದಾನಂದ ಕಾಮತ್‌ರವರ 5ನೇ ವರ್ಷದ ಪುಣ್ಯಸ್ಮರಣೆ ಡಿಂಡಿಮ ಬಳಗದ ಸದಸ್ಯರಿಂದ ಪರ್ಲಡ್ಕದ ಕಲಾಸ್ಪೂರ್ತಿ ಮನೆಯಲ್ಲಿ ನಡೆಯಿತು. ಚಿದಾನಂದ ಕಾಮತ್‌ರವರ ಪತ್ನಿ ಅನಿತಾಚಿದಾನಂದ ಕಾಮತ್ ದೀಪ ಬೆಳಗಿಸಿ ನುಡಿನಮನ ಸಲ್ಲಿಸಿದರು. ಡಿಂಡಿಮ ಬಳಗದ ಪರವಾಗಿ ಕರುಣಾಕರ ರೈ ಬಾಲ್ಯೊಟ್ಟು ಹಿರಿಯರಾದ ಸುಬ್ರಾಯ ಕೊಂಕೋಡಿ, ಡಿಂಡಿಮ ಬಳಗದ ಅಧ್ಯಕ್ಷ ವಸಂತಿ ಆರ್. ಐತಾಳ್, ಉಷಾ ನಾರಾಯಣ ಕುಂಬ್ರ ಸಂದರ್ಭೋಚಿತವಾಗಿ ಮಾತನಾಡಿದರು. ಶೀಲಾಜಯರಾಮ ಬಡಾವು, ಜ್ಯೋತಿ ಜನಾರ್ಧನ, ಲೀನಾ ರೇಗೋ, ಶೆಲ್ಡಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here