ಬೊಳುವಾರು ಕ್ಷೇತ್ರದಲ್ಲಿ ಆಟಿ ತಿಂಗಳ ಪ್ರಯುಕ್ತ ವಿಶೇಷ ದುರ್ಗಾಪೂಜೆ

0

ಪುತ್ತೂರು: ಬೊಳುವಾರು ಶ್ರೀದುರ್ಗಾಪರಮೇಶ್ವರಿ (ಉಳ್ಳಾಳ್ತಿ) ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ ಆಟಿ ತಿಂಗಳ ಪ್ರಯುಕ್ತ ಶ್ರೀದೇವರಿಗೆ ಕಲ್ಪೋಕ್ತ ಸಹಿತ ವಿಶೇಷ ದುರ್ಗಾಪೂಜೆ, ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆಯು ಜು.16ರಿಂದ ಪ್ರಾರಂಭಗೊಂಡಿದ್ದು, ಜು.24ರಂದು ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆಯಿತು. ಅ.16ರ ವರೆಗೆ ಪ್ರತಿದಿನ ಸಂಜೆ ಭಜನೆ, ರಾತ್ರಿ 7.30ಕ್ಕೆ ಶ್ರೀ ದುರ್ಗಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.


ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರಾದ ವೇ.ಮೂ. ಶ್ರೀಧರ ಭಟ್ ಕಬಕ, ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಭಟ್, ಕ್ಷೇತ್ರದ ವಿಶ್ವಸ್ಥ ಮಂಡಳಿ ಅಧ್ಯಕ್ಷ ಮನೋಹರ್ ರೈ, ಖಜಾಂಜಿ ಪ್ರಸನ್ನ ಬಲ್ಲಾಳ್, ಸದಸ್ಯರುಗಳಾದ ವಿ.ಕೆ. ಶೆಟ್ಟಿ, ಸುಂದರ ನಾಯ್ಕ್ ಸ್ಥಳೀಯರಾದ ರಂಗನಾಥ ರಾವ್, ಗೋವಿಂದ ನಾಯಕ್ ಪಾಲೆಚ್ಚಾರು, ಮೇಖಲ ಬಿ.ಎಸ್., ಶಕುಂತಳಾ ವಿ.ಕೆ. ಶೆಟ್ಟಿ, ಸುಧಾ ಎಂ. ರೈ, ಸುಮನ ಪುಟ್ಟಣ್ಣ ನೈಕ್ ಮತ್ತಿತರರು ಉಪಸ್ಥಿತರಿದ್ದರು.


ಅ.2 ನಾಗರಪಂಚಮಿ, ಅ.5 ವರಮಹಾಲಕ್ಷೀ ಪೂಜೆ: ಕ್ಷೇತ್ರದಲ್ಲಿ ನಾಗರಪಂಚಮಿ ಪ್ರಯುಕ್ತ ಅ.2ರಂದು ಬೆಳಿಗ್ಗೆ ನಾಗನ ಸನ್ನಿಧಿಯಲ್ಲಿ ತಂಬಿಲ ಸೇವೆ, ಅ.5ರಂದು ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸಂಜೆ ಶ್ರೀದುರ್ಗಾಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here