ಪುತ್ತೂರು ರೋಟರ‍್ಯಾಕ್ಟ್‌ನಿಂದ ವನಮಹೋತ್ಸವ

0

ಪುತ್ತೂರು: ರೋಟರ‍್ಯಾಕ್ಟ್‌ ಕ್ಲಬ್ ಪುತ್ತೂರು ಇದರ ವತಿಯಿಂದ ಜುಲೈ 24ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ವನಮಹೋತ್ಸವ ಆಚರಿಸಲಾಯಿತು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ದಿನೇಶ್ ಸಾಲ್ಯಾನ್ ಅವರು ಗಿಡ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ರೋಟರ‍್ಯಾಕ್ಟ್‌ ಕ್ಲಬ್ ಸಭಾಪತಿ ಶೀಧರ್, ಅಧ್ಯಕ್ಷ ಗಣೇಶ್ ಎನ್. ಕಲ್ಲರ್ಪೆ, ಕಾರ್ಯದರ್ಶಿ ಮಹೇಶ್‌ಚಂದ್ರ, ಉಪಾಧ್ಯಕ್ಷ ಶ್ರೀಕಾಂತ್ ಬಿರಾವು, ಶಶಿಧರ್, ನವೀನ್‌ಚಂದ್ರ, ರಾಹುಲ್, ಶ್ರೇಯಸ್, ಪುರುಷೋತ್ತಮ್, ವಿಶಾಲ್, ವಿಜಯ್, ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು, ಕಾರ್ಯದರ್ಶಿ ದಿವ್ಯಾ, ಮಜ್ಜಲಡ್ಕ ವಿಷ್ಣು ಯುವಶಕ್ತಿ ಬಳಗದ ಸಂಘಟನಾ ಕಾರ್ಯದರ್ಶಿ ರಾಜೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here