ಪುತ್ತೂರು:ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಸರಸ್ವತಿ ವಿದ್ಯಾರ್ಥಿ ಸಂಘ ಹಾಗೂ ಸಾರಸ್ವತ ಯುವ ಸಂಘ ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದರ್ಬೆಯ ಸಚ್ಚಿದಾನಂದ ಸೇವಾ ಸದನದ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿ ಬಿಪಿನ್ ಚಂದ್ರ ” ಯುವ ಸಮಾಜ ಸಕ್ರೀಯವಾಗಿ ಸಮಾಜಮುಖಿ ಕಾರ್ಯಕ್ರಮಗಳಿಗೆ ತೊಡಗಿಕೊಂಡಾಗ ಮಾತ್ರ ಯುವಶಕ್ತಿಯ ಸದ್ಭಳಕೆಯಾಗಲು ಸಾಧ್ಯ ಎಂದರು.
ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ದ ಅಧ್ಯಕ್ಷ ಶುಭಾಕರ ರಾವ್ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಯ್ ನಾಯಕ್ ಕಾರ್ಯದರ್ಶಿ ಅಮೃತಾಂಬಾ ಪ್ರಭು, ಸಾರಸ್ವತ ಯುವ ಸಂಘದ ಅಧ್ಯಕ್ಷೆ ಸಿಂಧು ಪ್ರಭು ,ಯುವ ಸಂಘದ ಕಾರ್ಯದರ್ಶಿ ಸದಾಶಿವ ನಾಯಕ್, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುದರ್ಶನ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವ ಸಂಘದ ಗೌರವ ಸಲಹೆಗಾರ ಮೂಲಚಂದ್ರ ಕಾಂಚನ ಪ್ರಸ್ತಾವಿಸಿ, ಜಯಶ್ರೀ ಪ್ರಾರ್ಥಿಸಿದರು .ದುರ್ಗಾಪ್ರಸಾದ್ ಬೆಳ್ಳಾರೆ ಸ್ವಾಗತಿಸಿ, ಆದರ್ಶ್ ವಂದಿಸಿದರು. ಸ್ವಪ್ನಾ ಮಾಣಿ ಕಾರ್ಯಕ್ರಮ ನಿರೂಪಿಸಿದರು.