ಮಾಜಿ ಸೈನಿಕನಿಂದ ಕಾರ್ಮಿಕನಿಗೆ ಹಲ್ಲೆ ಆರೋಪ

0

ಪುತ್ತೂರು:ಮಾಜಿ ಸೈನಿಕರೊಬ್ಬರು ನನಗೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡು ಕಾರ್ಮಿಕರೊಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.


ಬಪ್ಪಳಿಗೆ ತೆಂಕಿಲ ನಿವಾಸಿ ರವಿ ಹಲ್ಲೆಗೊಳಗಾದವರು. ನಾನು ಜು.25ರಂದು ಸಂಜೆ ಸರಕಾರಿ ನೌಕರರ ಸಭಾ ಭವನದ ಅಂಗಳವನ್ನು ಸ್ವಚ್ಛ ಗೊಳಿಸಿ ಈ ಕಸವನ್ನು ಸೈನಿಕ ಭವನದ ಆವರಣದ ಪಕ್ಕ ರಾಶಿ ಹಾಕಿದ್ದೇನೆ ಎಂದು ಆರೋಪಿಸಿ ಮಾಜಿ ಸೈನಿಕರೊಬ್ಬರು ನನಗೆ ಹಲ್ಲೆ ನಡೆಸಿದ್ದಾರೆ ಎಂದು ರವಿ ಆರೋಪಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ರವಿ ಯವರ ಮೇಲೆ ಹಲ್ಲೆಯಾಗಿರುವ ವಿಚಾರ ತಿಳಿದು ದಲಿತ ಸಂಘಟನೆಯ ಕೆಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆ ಘಟನೆಯ ಬಗ್ಗೆ ಪೊಲೀಸರು ಆಸ್ಪತ್ರೆ ತೆರಳಿ ಮಾಹಿತಿ ಪಡೆದುಕೊಂಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here