ಕುಂಬ್ರ ಶ್ರೀರಾಮ ಭಜನಾ ಮಂದಿರದ ಆಡಳಿತ ಮಂಡಳಿಗೆ ಆಯ್ಕೆ

0

ಅಧ್ಯಕ್ಷ: ರಾಜೇಶ್ ರೈ ಪರ್ಪುಂಜ, ಪ್ರ.ಕಾರ್ಯದರ್ಶಿ: ಪದ್ಮನಾಭ ರೈ. ಕೋಶಾಧಿಕಾರಿ: ಚಂದ್ರಕಾಂತ ಶಾಂತಿವನ

ಪುತ್ತೂರು: ಒಳಮೊಗ್ರು ಗ್ರಾಮ ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಆಡಳಿತ ಮಂಡಳಿಯ ವಾರ್ಷಿಕ ಮಹಾಸಭೆಯು ಸಮಿತಿಯ ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ರೈ ಅರೆಪ್ಪಾಡಿ, ಉಪಾಧ್ಯಕ್ಷರಾಗಿ ಮೋನಪ್ಪ ಪೂಜಾರಿ ಬಡಕ್ಕೋಡಿ, ಜತೆ ಕಾರ್ಯದರ್ಶಿಯಾಗಿ ಆಶಾಲತಾ ರೈ ಕುಂಬ್ರ, ಕೋಶಾಧಿಕಾರಿಯಾಗಿ ಚಂದ್ರಕಾಂತ ಶಾಂತಿವನರವರುಗಳನ್ನು ಆಯ್ಕೆ ಮಾಡಲಾಯಿತು. ಇದಲ್ಲದೆ ವಾರದ ಭಜನಾ ಸಂಚಾಲಕರಾಗಿ ಆಶೋಕ್ ಬಡಕ್ಕೋಡಿ ಮತ್ತು ಜಗನ್ನಾಥ ಪೂಜಾರಿ ಮುಡಾಲ, ಅಷ್ಟಮಿಯ ಸಂಚಾಲಕರಾಗಿ ರಾಜ್‌ಪ್ರಕಾಶ್ ರೈ ಕುಂಬ್ರ, ಗಣೇಶೋತ್ಸವ ಸಂಚಾಲಕರಾಗಿ ರಾಜ್‌ಮೋಹನ್ ರೈ ನಿರಾಲ, ಕನ್ಯಾಸಂಕ್ರಮಣದ ಸಂಚಾಲಕರಾಗಿ ಪುರಂದರ ಶೆಟ್ಟಿ ಮುಡಾಲರವರುಗಳನ್ನು ಆಯ್ಕೆ ಮಾಡಲಾಯಿತು.

ಮಾಜಿ ಅಧ್ಯಕ್ಷ ದುರ್ಗಾಪ್ರಸಾದ್ ರೈ ಕುಂಬ್ರ ಚುನಾವಣಾ ಅಧಿಕಾರಿಯಾಗಿದ್ದರು. ಅಧ್ಯಕ್ಷ ಬಾಬು ಪೂಜಾರಿ ಬಡಕ್ಕೋಡಿಯವರು ನೂತನ ಸಮಿತಿಗೆ ಅಧಿಕಾರ ಹಸ್ತಾಂತರಿಸಿ ಶುಭ ಕೋರಿದರು. ನೂತನ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ ಎಲ್ಲರ ಸಹಕಾರ ಕೋರಿ ವಂದಿಸಿದರು.
………
ಚಿತ್ರಗಳು ಇವೆ. ರಾಜೇಶ್ ರೈ ಪರ್ಪುಂಜ ಫೋಟೋ ನಮ್ಮಲ್ಲಿದೆ

LEAVE A REPLY

Please enter your comment!
Please enter your name here