ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಪುತ್ತೂರು ಸಂತ ವಿಕ್ಟರ್ಸ್ ಬಾಲಿಕಾ ಪ್ರೌಢ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು ಶಾಲೆಯ 7ನೇ ತರಗತಿ ವಿದ್ಯಾರ್ಥಿನಿಯರಾದ ಧೃತಿ ಜೆ ರೈ 28 ಕೆಜಿ ಕುಮಿಟೆ ವಿಭಾಗದಲ್ಲಿ ದ್ವಿತೀಯ ಹಾಗೂ 35 ಕೆಜಿ ಕುಮಿಟೆ ವಿಭಾಗದಲ್ಲಿ 9 ನೇ ತರಗತಿಯ ಜೀವಿತಾ ಕೆ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಧೃತಿಯವರು ಕೆಯ್ಯೂರು ಗ್ರಾಮದ ಚಾವಡಿತ್ತಾರು ಜತ್ತಪ್ಪ ರೈ ಮತ್ತು ರೇವತಿ ದಂಪತಿಯ ಪುತ್ರಿ ಹಾಗೂ ಜೀವಿತಾ ರವರ ಕಂಚಿನಪದವು ಜಯಂತಿ ಗಿರೀಶ್ರವರ ಪುತ್ರಿಯಾಗಿದ್ದಾರೆ.