ಬೊಳುವಾರಿನಲ್ಲಿ ರಸ್ತೆಯಲ್ಲಿ ನಿರ್ಮಾಣವಾದ ಹೊಂಡಗಳು – ವಾಹನ ಸವಾರರಿಗೆ ಸವಾಲು

0

ಪುತ್ತೂರು: ಬೊಳುವಾರು ಮಂಗಳೂರು ರಸ್ತೆಯ ಜಂಕ್ಷನ್ ಬಳಿ ಕಿತ್ತು ಹೋದ ಡಾಮರ್ ರಸ್ತೆಯಿಂದಾಗಿ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಸಂಚಾರಕ್ಕೆ ಸವಾಲಾಗಿದೆ.


ಎಪ್ರಿಲ್ ತಿಂಗಳಲ್ಲಿ ಹೈಮಾಸ್ಟ್ ಲೈಟ್ ಉದ್ಘಾಟನೆ ಸಂದರ್ಭ ಈ ಭಾಗದಲ್ಲಿ ಡಾಮರೀಕರಣ ಮಾಡಲಾಗಿತ್ತು. ಆದರೆ 2 ತಿಂಗಳಲ್ಲಿ ಡಾಮರು ಕಿತ್ತು ಹೋಗಿದ್ದು, ವಾಹನ ಸವಾರರಿಗೆ ಸಂಚಾರ ಮಾಡಲು ಸವಾಲಾಗಿದೆ. ಪ್ರತಿ ಭಾರಿ ಉಪ್ಪಿನಂಗಡಿ ಕಡೆ ಹೋಗುವ ವಾಹನಗಳೂ ಇಲ್ಲಿ ಸುತ್ತುವರಿದು ಹೋಗುವ ಸಂದರ್ಭ ಎಷ್ಟೋ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದಿದ್ದು,  ಈ ಕುರಿತು ಸಂಬಂಧಿಸಿದವರು ತಕ್ಷಣ ಗಮನಿಸಿ ರಸ್ತೆ ದುರಸ್ಥಿ ಕೈಗೊಳ್ಳಬೇಕೆಂದು ಎಂದು ಸ್ಥಳೀಯ ಆಟೋ ರಿಕ್ಷಾ ಚಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here