ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮೃತ ದೇಹದ ಅಂತಿಮ ಯಾತ್ರೆಗೆ ಸಂಬಂಧಿಸಿ ಜು.27 ರಂದು ಪುತ್ತೂರಿನಲ್ಲಿ ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ಅಂಬಿಕಾ, ವಿವೇಕಾನಂದ, ಪ್ರಗತಿ ಸ್ಟಡಿ ಸೆಂಟರ್ ಗೆ ರಜೆ ಸಾರಲಾಗಿದೆ.
ಜು27ರಂದು ನಡೆಯಬೇಕಿದ್ದ ಆಯಾ ತರಗತಿಗಳ ಪರೀಕ್ಷೆಯನ್ನು ಜು.30ರಂದು ನಡೆಸಲಾಗುವುದು, ಜು.28ರಿಂದ ನಡೆಯಲಿರುವ ಪರೀಕ್ಷೆಗಳನ್ನು ಯಥಾಪ್ರಕಾರ ನಡೆಸಲಾಗುವುದು. ಪ್ರಗತಿ ಸ್ಟಡಿ ಸೆಂಟರ್ನ ಸಂಚಾಲಕರಾದ ಗೋಕುಲ್ ನಾಥ್ ಪಿವಿ ತಿಳಿಸಿದ್ದಾರೆ.