ಕಾಣಿಯೂರು: ಎಡಬಿಡದೆ ಸುರಿದ ಮಳೆಯಿಂದಾಗಿ ಹಾನಿ ಗೊಂಡಿದ್ದ ಕಾಯ್ಮಣ ಗ್ರಾಮದ ಅಂಕಜಾಲು ಖತೀಜಮ್ಮರವರ ಮನೆ ಕುಸಿದು ಬಿದ್ದಿದೆ. ಮನೆ ಹಗಲು ಹೊತ್ತಿನಲ್ಲಿ ಬಿದ್ದಿರುವುದರಿಂದ ಮನೆಯಲ್ಲಿ ವಾಸಿಸುತ್ತಿದ್ದ ಹದಿನೆಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ವರಿ ಅಗಳಿ, ಮೋಹನ್ ಅಗಳಿ, ಜಯಂತ ಅಬೀರ, ಯಶವಂತ ಕಳುವಾಜೆ, ಬಾಲಕೃಷ್ಣ ಮಾದೇರಿ ಭೇಟಿ ನೀಡಿದ್ದಾರೆ.