“ಎನ್ನ ಬಾಲೆ ನನ ಎಂಕ್ ಉಂಡಾ?”: ಮೃತ ಪ್ರವೀಣ್ ತಾಯಿಯ ಅರಣ್ಯರೋಧನ
ಪುತ್ತೂರು: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಜುಲೈ 28ರಂದು ಬೆಳಿಗ್ಗೆ ಭೇಟಿ ನೀಡಿದ್ದು, ಸಾಂತ್ವನ ಹೇಳಿದ್ದಾರೆ.
ಪ್ರವೀಣ್ ಅವರ ಪತ್ನಿ ನೂತನಾ ಹಾಗೂ ತಾಯಿ ರತ್ನಾವತಿ ಅವರ ರೋಧನ ಮುಗಿಲು ಮುಟ್ಟಿದ್ದು, ಶಕುಂತಳಾ ಶೆಟ್ಟಿ ಅವರು ಸಮಾಧಾನಿಸಲು ಪ್ರಯತ್ನಿಸಿದರು. “ಯಾನ್ ನನ ದಾದ ಮಲ್ಪುನೆ. ಎಂಕೋಜೆ ಬಾಲೆ ಇತ್ತ್ನೆ. ಎನ್ನ ಬಾಲೆ ನನ ಎಂಕ್ ಉಂಡಾ?” ಹೀಗೆ ಪ್ರವೀಣ್ ಅವರ ತಾಯಿ ರತ್ನಾವತಿ ಅವರು ಅಳಲು ತೋಡಿಕೊಂಡರು.