ಕೊಯಿಲ: ದೇವಸ್ಥಾನ, ಅಂಗನವಾಡಿಯಲ್ಲಿ ಗಿಡ ವಿತರಣೆ

0

 

ಕೊಯಿಲ: ಮಾತೃ ಭೂಮಿ ಸಾವಯವ ಕೃಷಿ ಪರಿವಾರ ಕಡಬ ತಾಲೂಕು ಇವರ ಸಹಯೋಗದಲ್ಲಿ ಮನೆ ಮನೆಗಳಲ್ಲಿ ಗಿಡ ನೆಡಬೇಕು ಎಂಬ ಅಭಿಯಾನದ ಪ್ರಯುಕ್ತ ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಹಾಗೂ ಆನೆಗುಂಡಿ ಅಂಗನವಾಡಿ ಕೇಂದ್ರದಲ್ಲಿ ಬಿಲ್ವಪತ್ರೆ, ಶ್ರೀಗಂಧ, ರಕ್ತಚಂದನ, ಸಾಗುವಾನಿ, ಮಾವು, ಹಲಸು ಮುಂತಾದ ವಿವಿಧ ಜಾತಿಯ 600ಕ್ಕಿಂತಲೂ ಹೆಚ್ಚು ಗಿಡಗಳನ್ನು ವಿತರಿಸಲಾಯಿತು.

ಮಾತೃ ಭೂಮಿ ಸಾವಯವ ಕೃಷಿ ಪರಿವಾರದ ಕೊಯಿಲ ಗ್ರಾಮ ಸಂಯೋಜಕಿ ಮಮತಾ ಯದುಶ್ರೀ ಆನೆಗುಂಡಿಯವರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜ ಪಲ್ಲಡ್ಕ ಹಾಗೂ ಅಂಗನವಾಡಿ ಶಿಕ್ಷಕಿ ಜಯಂತಿ ಲಕ್ಷ್ಮಣರವರಿಗೆ ಗಿಡ ಹಸ್ತಾಂತರ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಅಭ್ಯುದಯ ಸಮಿತಿ ಅಧ್ಯಕ್ಷ ಸೋಮನಾಥ ಪಲ್ಲಡ್ಕ, ಭವಿತ್ ರಾಜ್, ಧಾರ್ಮಿಕ ಶಿಕ್ಷಣದ ಶಿಕ್ಷಕಿ ರಕ್ಷಿತಾ ಹಾಗೂ ಮಕ್ಕಳು ಉಪಸ್ಥಿತರಿದ್ದರು. ಆನೆಗುಂಡಿ ಅಂಗನವಾಡಿಯಲ್ಲಿ ಚಂಪ ಸ್ತ್ರೀಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here