ಕೆಮ್ಮಾರ: ಸ್ನೇಹ ಸ್ವಸಹಾಯ ಸಂಘದ ವಾರ್ಷಿಕೋತ್ಸವ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಾರ ಕೆಮ್ಮಾರ ಒಕ್ಕೂಟದ ಸ್ನೇಹ ಸ್ವ ಸಹಾಯ ಸಂಘದ 20ನೇ ವಾರ್ಷಿಕೋತ್ಸವ ಸಂಘದ ಸದಸ್ಯೆ ಶ್ರೀಮತಿ ಬೇಬಿ ರೇಖಾರವರ ಮನೆಯಲ್ಲಿ ನಡೆಯಿತು.

ಕೆಮ್ಮಾರ ಒಕ್ಕೂಟದ ಅಧ್ಯಕ್ಷ ರವಿಕಾಂತ್‌ರವರು ಉದ್ಘಾಟಿಸಿದರು. ಉಪ್ಪಿನಂಗಡಿ ವಲಯ ಮೇಲ್ವಿಚಾರಕ ಚಂದ್ರಶೇಖರ್ ಶುಭ ಹಾರೈಸಿದರು. ಸೇವಾ ಪ್ರತಿನಿಧಿ ಮಮತಾ ಉಪಸ್ಥಿತರಿದ್ದರು. ಸ್ನೇಹ ಸ್ವಸಹಾಯ ಸಂಘದ ಸದಸ್ಯೆ ಯಶೋಧ ಅಧ್ಯಕ್ಷತೆ ವಹಿಸಿದ್ದರು. ಸಂಘದಲ್ಲಿ ಇದುವರೆಗೆ ೨೫ ಲಕ್ಷ ರೂ., ಸಾಲದ ವ್ಯವಹಾರ ನಡೆದಿದ್ದು ಪ್ರತಿವಾರವೂ ಉತ್ತಮ ರೀತಿಯಲ್ಲಿ ಮರುಪಾವತಿ ಆಗುತ್ತಿದೆ. ಸುಮಾರು ರೂ.1.5 ಲಕ್ಷ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಸದಸ್ಯರಿಗೆ ಆರೋಗ್ಯ ಸೌಲಭ್ಯ ಸಿಕ್ಕಿದೆ. ಕೇಂದ್ರ ಸರಕಾರದ ಕಾರ್ಯಕ್ರಮಗಳಾದ ಪಿಎಂsಜಿವೈ ಎನ್‌ಪಿಎಸ್ ಈ ಶ್ರಮ ಕಾರ್ಡ್ ಸೌಲಭ್ಯಗಳನ್ನು ಸದಸ್ಯರು ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಯೋಜನೆಯ ಕಾರ್ಯಕ್ರಮಗಳಾದ ಸೋಲಾರ್ ಅಳವಡಿಕೆ, ಗ್ರಾಮೀಣ ಒಲೆ ಉಪಯೋಗ ಸೌಲಭ್ಯಗಳನ್ನು ಸದಸ್ಯರು ಪಡಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಯಿತು.

LEAVE A REPLY

Please enter your comment!
Please enter your name here