ಪುತ್ತೂರು: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಉಪ್ಪಳಿಗೆ ಮತ್ತು ಪರ್ಪುಂಜ ಘಟ ಸಮಿತಿ ವತಿಯಿಂದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನಾಗರ ಪಂಚಮಿ ಪೂರ್ವಭಾವಿಯಾಗಿ ಸ್ವಚ್ಚತಾ ಕಾರ್ಯಕ್ರಮ ಜು.29 ರಂದು ನಡೆಯಿತು.
ಉಪ್ಪಳಿಗೆ ಘಟ ಸಮಿತಿ ಅಧ್ಯಕ್ಷ ಪ್ರಜ್ವಲ್ ರೈ ತೊಟ್ಲ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯದಲ್ಲಿ ಒಡಿಯೂರು ಶ್ರೀ ಗ್ರಾಮ ವಿಕಾಸ ಪುತ್ತೂರು ವಲಯ ಸಂಯೋಜಕಿ ಶಶಿ . ಬಿ ಹಾಗೂ ಗ್ರಾಮ ದೀಕ್ಷಿತೆಯರು, ಘಟ ಸಮಿತಿ ಸದಸ್ಯರು ಭಾಗವಹಿಸಿದ್ದರು. ದೇವಳದ ಭಕ್ತರೂ, ಅಭಿವೃದ್ಧಿ ಕಾರ್ಯದ ಮಾರ್ಗದರ್ಶಕರಾದ ಊರ ಪ್ರಮುಖವಾದ ಮರಿಕೆ ಕುಟುಂಬದ ಡಾ. ಸತೀಶ್ ರಾವ್ ಮರಿಕೆ ಉಪಸ್ಥಿತರಿದ್ದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ಭಾರತಿ ಶಾಂತಪ್ಪ ಪೂಜಾರಿ, ಸಿಬ್ಬಂದಿ ಚಂದ್ರಕಲಾ ಜಗದೀಶ್ ಪೂಜಾರಿ ಉಪಸ್ಥಿತರಿದ್ದರು.