ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ವರಮಹಾಲಕ್ಷ್ಮೀ ಪೂಜಾ ಸಮಿತಿಯ ವತಿಯಿಂದ ಒಂಭತ್ತನೆಯ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಅ.5 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆಯು ಇತ್ತೀಚೆಗೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ರವಿಕಿರಣ್ ಶೆಟ್ಟಿ ಬೆದ್ರಾಡಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಈಶ್ವರಮಂಗಲ ವರಮಹಾಲಕ್ಷ್ಮೀ ಪೂಜಾ ಸಮಿತಿ ಸ್ಥಾಪಕಾಧ್ಯಕ್ಷೆ ಅಮಿತಾ ಸೀತಾರಾಮ ಮನೋಳಿತ್ತಾಯ, ಈಶ್ವರಮಂಗಲ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷ ರತಿ ಕೊರಗಪ್ಪ ರೈ ಸುರುಳಿಮೂಲೆ, ಕಾರ್ಯದರ್ಶಿ ಕಸ್ತೂರಿ ರೈ ಮೇನಾಲ, ಖಜಾಂಜಿ ಅರುಣಾ ಸತೀಶ್ ಶೆಟ್ಟಿ ಮುಂಡ್ಯ, ಸಂಘಟನಾ ಕಾರ್ಯದರ್ಶಿ ರತೀ ರಮೇಶ್ ಪೂಜಾರಿ ಮುಂಡ್ಯ, ಕಾರ್ಯಧ್ಯಕ್ಷ ವಸಂತಿ ಪಟ್ರೋಡಿ, ಸುಮತಿ ಜಿ ರೈ ಪಿಲಿಪಂಜರ, ಕಾರ್ಯದರ್ಶಿ ಕೋಮಲ ಕೃಷ್ಣಪ್ಪ ಗೌಡ, ಪ್ರೇಮ ಜಗನ್ನಾಥ ರೈ, ಶೋಭಾ ರವೀಂದ್ರ ಅದಿಂಜ, ಉಪಾಧ್ಯಕ್ಷ ವೇದಾವತಿ ಸುಭಾಶ್ಚಂದ್ರ ರೈ ಮೈರೋಳು,ಶ್ರೀ ವರಮಹಾಲಕ್ಷ್ಮೀ ಸ್ಥಾಪಕ ಪೂಜಾ ಸಮಿತಿಯ ಶಾಶ್ವತ ಮಹಾ ಪೋಷಕರಾದ ರಾಮ ಮೇನಾಲ, ಸುಭಾಶ್ಚಂದ್ರ ರೈ ಮೈರೋಳು,ಮತ್ತು ರೋಹಿಣಿ ಶಿವರಾಮ ಕತ್ರಿಬೈಲು, ದಿಪಿಕಾ ಗಿರೀಶ್ ರೈ ಮರಕಡ ಮುಂತಾದವರು ಉಪಸ್ಥಿತರಿದ್ದರು.