ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಗೀಡಾಗಿರುವ ಪ್ರವೀಣ್ ನೆಟ್ಟಾರು ಮನೆಗೆ ಜು.30ರಂದು ವಿಶ್ವ ಹಿಂದೂ ಪರಿಷತ್ ಪ್ರಮುಖರು ಹಾಗೂ ಸ್ವಾಮೀಜಿಗಳು ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷರಾದ ಎಂ.ಬಿ ಪುರಾಣಿಕ್, ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಮಹಾಬಲೇಶ್ವರ ಸ್ವಾಮೀಜಿ,ಚಿಲಿಂಬಿ ಕ್ಷೇತ್ರದ ಸಾಯಿ ಓಂ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ,ಉಡುಪಿ ಕಟಪಾಡಿಯ ಸ್ವಾಮೀಜಿ ಸಾಯಿ ಈಶ್ವರ್,ಮಾತಾ ಶ್ರೀ ಶಿವಜ್ಞಾನಾಮಯಿ ಸರಸ್ವತಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪೈಲ್,ಸಂಚಾಲಕ ಸುನಿಲ್.ಕೆ.ಆರ್,ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ರಘು ಸಕಲೇಶಪುರ,ಭುಜಂಗ ಕುಲಾಲ್,ಗೋಪಾಲ್ ಕುತ್ತಾರ್,ಶಿವಾನಂದ್ ಮೆಂಡನ್,ಶ್ರೀಧರ್ ಪುತ್ತೂರು,ಡಾ.ಕೃಷ್ಣಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.