ಬೆಂಗಳೂರಿನಿಂದ ಪ್ರವೀಣ್ ನೆಟ್ಟಾರ್ ಮನೆಗೆ ಆಗಮಿಸಿದ ಪುನೀತ್ ಕೆರೆಹಳ್ಳಿ

0

ಬೆಳ್ಳಾರೆ:ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಬೆಂಗಳೂರಿನಿಂದ ತಮ್ಮ ಸಂಗಡಿಗರೊಂದಿಗೆ ಪ್ರವೀಣ್ ನೆಟ್ಟಾರ್ ಮನೆಗೆ ಆಗಮಿಸಿ ಮನೆಯವರಿಗೆ ಸಾಂತ್ವಾನದ ಮಾತುಗಳಾಡಿದರು.
ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ಪುನೀತ್ ಕೆರೆಹಳ್ಳಿ”ಇದೊಂದು ಕೆಟ್ಟ ಘಟನೆ.ನಮ್ಮ ಅಣ್ಣನ ಹತ್ಯೆಯಾದಾಗ ಆತನ ಮನೆಯವರಿಗೆ ಸಾಂತ್ವನ ಹೇಳಲು ಬಂದಿದ್ದೇವೆ.ಈ ಪ್ರಕರಣದಲ್ಲಿ ಪೊಲೀಸ್ ಬಾಲಕೃಷ್ಣರ ಬಗ್ಗೆ ಬಹಳಷ್ಟು ಸಂಶಯಗಳಿವೆ.ಅವರು ಪ್ರವೀಣ್ ರನ್ನು ಮುಸ್ಲಿಂ ಆ್ಯಂಬುಲೆನ್ಸ್ ನಲ್ಲಿ ಕಳಿಸಿದ್ದು ಯಾಕೆ.ಸರ್ಕಾರಿ ಆ್ಯಂಬುಲೆನ್ಸ್ ಇರಲಿಲ್ಲವೇ ಈ ರೀತಿಯ ಅನೇಕ ಅನುಮಾನಗಳ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಮನವಿ ಮಾಡಿದ್ದೇವೆ.ಬಾಲಕೃಷ್ಣ ರನ್ನು ಪೊಲೀಸ್ ಇಲಾಖೆಯಿಂದ ಅಮಾನತು ಮಾಡಬೇಕು.ಈಗಿನ ಬಂಧನದ ಬಗ್ಗೆ ನಮಗೆ ಸಮಧಾನವಿಲ್ಲ.ನಿಜವಾದ ಆರೋಪಿಗಳ ಬಂಧನವಾಗಬೇಕು.ಪ್ರವೀಣ್ ಸಾವಿಗೆ ನ್ಯಾಯ ಸಿಗಬೇಕು”ಎಂದರು.

LEAVE A REPLY

Please enter your comment!
Please enter your name here