ಸಿಇಟಿ-2022 ಫಲಿತಾಂಶ: ಅಂಬಿಕಾದ ವಿದ್ಯಾರ್ಥಿಗಳಿಗೆ 500ರೊಳಗಿನ 8 ರ‍್ಯಾಂಕ್

0

ಪುತ್ತೂರು: 2022ನೇ ಸಾಲಿನ ಸಿಇಟಿಯಲ್ಲಿ ಪುತ್ತೂರಿನ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ಮೊದಲ 500ರಲ್ಲಿ 8 ರ‍್ಯಾಂಕ್‌ಗಳನ್ನು ಗಳಿಸುವುದರೊಂದಿಗೆ ಮೊದಲ 1000ದಲ್ಲಿ 17 ರ‍್ಯಾಂಕ್‌ಗಳನ್ನು ಪಡೆದುಕೊಂಡಿರುತ್ತಾರೆ.

ಬಿಎನ್‌ವೈಎಸ್ ವಿಭಾಗದಲ್ಲಿ ಶ್ರೀವತ್ಸ ಎಂ ಕೆ 181ನೇ ರ‍್ಯಾಂಕ್ (ಅಗ್ರಿಕಲ್ಚರ್ ಬಿ.ಎಸ್ಸಿ -250, ವೆಟರ್ನರಿ ಸೈನ್ಸ್-333, ಬಿ-ಫಾರ್ಮ/ಡಿ-ಫಾರ್ಮ-506, ಇಂಜಿನಿಯರಿಂಗ್-1096) ಗಳಿಸಿ ವಿದ್ಯಾಲಯಕ್ಕೆ ಪ್ರಥಮ ಸ್ಥಾನಿಯಾಗಿದ್ದಾನೆ. ಈತ ಮಡಿಕೇರಿಯ ಕೃಷ್ಣಮೂರ್ತಿ ಎಮ್ ಎಸ್ ಮತ್ತು ಪರಿಮಳ ಎಂ ಎಸ್ ದಂಪತಿಯ ಪುತ್ರ. ಎಗ್ರಿ ಬಿ.ಎಸ್ಸಿ. ಯಲ್ಲಿ ಕಡಬದ ಲೋಕೇಶ್ ಎ ಹಾಗೂ ಉಷಾ ಬಿ. ದಂಪತಿ ಪುತ್ರ ಅನುಷ್ ಎ ಎಲ್ 187ನೇ ರ‍್ಯಾಂಕ್, (ಬಿಎನ್‌ವೈಎಸ್ -320, ವೆಟರ್ನರಿ ಸೈನ್ಸ್-696, ಬಿ-ಫಾರ್ಮ/ಡಿ-ಫಾರ್ಮ-921, ಇಂಜಿನಿಯರಿಂಗ್-862) ಗಳಿಸಿದ್ದು, ರಾಮಕುಂಜದ ಚಿತ್ತರಂಜನ್ ಮತ್ತು ಸಂಧ್ಯಾ ದಂಪತಿ ಪುತ್ರ ಕೌಶಿಕ್ ರಾವ್ ಎಗ್ರಿ ಬಿ.ಎಸ್ಸಿ.ಯಲ್ಲಿ 238ನೇ ರ‍್ಯಾಂಕ್ ( ಬಿಎನ್‌ವೈಎಸ್ -246, ವೆಟರ್ನರಿ ಸೈನ್ಸ್-454, ಬಿ-ಫಾರ್ಮ/ಡಿ-ಫಾರ್ಮ-637, ಇಂಜಿನಿಯರಿಂಗ್-1060) ಗಳಿಸಿಕೊಂಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ಬೊಳ್ವಾರಿನ ಎಚ್ ಸತ್ಯ ಪ್ರಕಾಶ್ ಮತ್ತು ಸುರೇಖ ದಂಪತಿಯ ಪುತ್ರ ವರುಣ್ ಎಸ್ 698ನೇ ರ‍್ಯಾಂಕ್ ಹಾಗೂ ಬಾಯರಿನ ವಿಘ್ನೇಶ್ವರ ಕೆದುಕೋಡಿ ಮತ್ತು ವಸಂತಿ ಎಂ. ದಂಪತಿಯ ಪುತ್ರ ವಿಶ್ವಜಿತ್ ಕೆ 823ನೇ ರ‍್ಯಾಂಕ್ ಗಳಿಸಿ ವಿದ್ಯಾಲಯದ ಟಾಪರ್ ಎನಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಶ್ರೇಯಸ್ ಗೌಡ ಬಿ ಎನ್ ಎಗ್ರಿ ಬಿ.ಎಸ್ಸಿ.ಯಲ್ಲಿ 598ನೇ ರ‍್ಯಾಂಕ್, ಬಿಎನ್‌ವೈಎಸ್ ನಲ್ಲಿ 751ನೇ ಹಾಗೂ ಇಂಜಿನಿಯರಿಂಗ್-1818ನೇ ರ‍್ಯಾಂಕ್ (ಬೆಂಗಳೂರಿನ ನಿಂಗೇಗೌಡ ಹಾಗೂ ಸುನಿತಾ ಪಿ.ಕೆ ದಂಪತಿ ಪುತ್ರ), ಅನುಜ್ಞಾ ಶಂಕರಿ ಬಿ ಎಗ್ರಿ ಬಿ.ಎಸ್ಸಿ.ಯಲ್ಲಿ 1156ನೇ ರ‍್ಯಾಂಕ್ ಹಾಗೂ ಬಿಎನ್‌ವೈಎಸ್ ನಲ್ಲಿ 1865ನೇ ರ‍್ಯಾಂಕ್ (ಕಾಸರಗೋಡು ಏತಡ್ಕ ಶಂಕರ ಭಟ್ ಬಿ ಮತ್ತು ಆಶಾ ಕೆ ದಂಪತಿ ಪುತ್ರಿ), ರಿತಿಕಾ ಎನ್ ಅಚಾರ್ಯ ಅಗ್ರಿ ಬಿ.ಎಸ್ಸಿ.ನಲ್ಲಿ 1226ನೇ ಹಾಗೂ ಬಿಎನ್‌ವೈಎಸ್ ನಲ್ಲಿ 1748ನೇ ರ‍್ಯಾಂಕ್ (ದರ್ಬೆಯ ನಿರಂಜನ ಆಚಾರ್ಯ ಕೆ ಮತ್ತು ಹೇಮಲತಾ ಎನ್ ಆಚಾರ್ಯ ದಂಪತಿಯ ಪುತ್ರಿ), ಸ್ಮೃತಿ ರೈ ಅಗ್ರಿ ಬಿ.ಎಸ್ಸಿ.ಯಲ್ಲಿ 1329ನೇ ರ‍್ಯಾಂಕ್ (ಪುತ್ತೂರಿನ ಬಪ್ಪಳಿಗೆಯಲ್ಲಿನ ಬಿ.ಸಂಕಪ್ಪ ರೈ ಹಾಗೂ ಸುಪ್ರಿಯಾ ಎಸ್ ರೈ ದಂಪತಿ ಪುತ್ರಿ), ಶ್ರೀವಿದ್ಯಾ ಎಗ್ರಿ ಬಿ.ಎಸ್ಸಿ.ಯಲ್ಲಿ 1536ನೇ ಹಾಗೂ ಬಿಎನ್‌ವೈಎಸ್ ನಲ್ಲಿ 1741ನೇ ರ‍್ಯಾಂಕ್ (ಕಾಸರಗೋಡಿ ಸದಾಶಿವ ಭಟ್ ಎಸ್ ವಿ ಮತ್ತು ಪೂರ್ಣಿಮ ದಂಪತಿ ಪುತ್ರಿ), ಸುದೀಪ್ ಎಲ್ ಸಿ ಇಂಜಿನಿಯರಿಂಗ್‌ನಲ್ಲಿ 2167ನೇ ರ‍್ಯಾಂಕ್ (ಮೈಸೂರಿನ ಬಸವರಾಜ ಪುರದ ಚಂದ್ರಶೇಖರ ಹಾಗೂ ರತ್ನಮ್ಮ ದಂಪತಿ ಪುತ್ರ), ನೇಹಾ ಎಸ್ ಎನ್ ಎಗ್ರಿ ಬಿ.ಎಸ್ಸಿ. ಯಲ್ಲಿ 2268ನೇ ರ‍್ಯಾಂಕ್ (ಸಕ್ಲೇಶ್ ಪುರದ ಎಸ್ ಪಿ ನಾಗೇಶ್ ಹಾಗೂ ಜ್ಯೋತಿ ನಾಗೇಶ್ ದಂಪತಿ ಪುತ್ರಿ) , ಅಶ್ವಿಜಾ ಇಂಜಿನಿಯರಿಂಗ್‌ನಲ್ಲಿ 2387ನೇ ರ‍್ಯಾಂಕ್ (ಕುಂಬ್ರದ ರಾಜೀವ ಶೆಟ್ಟಿ ಮತ್ತು ಸರೋಜ ದಂಪತಿಯ ಪುತ್ರಿ) ಹಾಗೂ ಆಶ್ಲೇಷ ಟಿ ಇಂಜಿನಿಯರಿಂಗ್‌ನಲ್ಲಿ 2407 ನೇ ರ‍್ಯಾಂಕ್ (ತೂಂಬಡ್ಕದ ರಾಧಾಕೃಷ್ಣ ಭಟ್ ಟಿ ಮತ್ತು ವಿದ್ಯಾ ದಂಪತಿಯ ಪುತ್ರ) ಪಡೆದು ವಿದ್ಯಾಲಯದ ಇತರ ಸಾಧಕ ವಿದ್ಯಾರ್ಥಿಗಳಾಗಿದ್ದಾರೆ.

LEAVE A REPLY

Please enter your comment!
Please enter your name here