ಅಂಚೆ ಇಲಾಖೆಯ ಕಾವು ಪೋಸ್ಟ್ ಮಾಸ್ಟರ್ ಮೋಹನ್ ಕುಮಾರ್ ನಿವೃತ್ತಿ

0

ಪುತ್ತೂರು:ಅಂಚೆ ಇಲಾಖೆಯ ಕಾವು ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ ಮೋಹನ್ ಕುಮಾರ್ ಡಿಯವರು ಜು.31ರಂದು ನಿವೃತ್ತರಾಗಿದ್ದಾರೆ. 1993ರಲ್ಲಿ ಮೂಡಬಿದರೆಯಲ್ಲಿ ಅಂಚೆ ಇಲಾಖೆಗೆ ಪೋಸ್ಟ್‌ಮ್ಯಾನ್ ಆಗಿ ನೇಮಕಗೊಂಡಿದ್ದರು. ನಂತರ ಪುತ್ತೂರು, ದರ್ಬೆಯಲ್ಲಿ ಕರ್ತವ್ಯ ನಿರ್ವಹಿಸಿ 2000ದಲ್ಲಿ ಗುಂಡ್ಲುಪೇಟೆಯಲ್ಲಿ ಗುಮಾಸ್ತರಾಗಿ ಪದೋನ್ನತಿ ಪಡೆದುಕೊಂಡಿದ್ದರು. ನಂತರ ಗುತ್ತಿಗಾರು, ಕಲ್ಲಡ್ಕ, ಮಾಣಿ, ಆರ್ಯಾಪು, ಪಂಜ, ದರ್ಬೆ, ಪುತ್ತೂರು, ಕೋರ್ಟ್‌ಹಿಲ್ ಆರ್ಯಾಪುಗಳಲ್ಲಿ ಕರ್ತವ್ಯ ನಿರ್ವಹಿಸಿ 2020ರಲ್ಲಿ ಪೋಸ್ಟ್ ಮಾಸ್ಟರ್ ಆಗಿ ಪದೋನ್ನತಿ ಪಡೆದು ಕಾವು ಕಚೇರಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸಿದ್ದರು.

ಪತ್ನಿ ಸುಶೀಲ ಪಿ., ಪುತ್ರಿ ದೀಕ್ಷಿತಾ ಎನ್.ಎಮ್., ಪುತ್ರ ನಿತಿನ್ ಎನ್.ಎಮ್., ಅಳಿಯ ಜಯಾನಂದ ಕೆ.ಎಸ್, ಮೊಮ್ಮಗ ಮೃದುಲ್ ಕೆ.ಜೆಯವರೊಂದಿಗೆ ಮೊಟ್ಟೆತ್ತಡ್ಕದಲ್ಲಿ ವಾಸ್ತವ್ಯವಿದ್ದಾರೆ. ಇವರು ಮೊಟ್ಟೆತ್ತಡ್ಕ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here