ಪ್ರವೀಣ್ ನೆಟ್ಟಾರು ಮನೆಗೆ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಭೇಟಿ

0

ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ಒಡಿಯೂರು ಶ್ರೀ ಗುರುದೇವತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆ.1ರಂದು ಭೇಟಿ ನೀಡಿದರು. ಪ್ರವೀಣ್ ನೆಟ್ಟಾರು ಮನೆಯವರೊಂದಿಗೆ ಮಾತನಾಡಿದ ಅವರು ಮನೆಯವರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.

ಸುದ್ದಿಯೊಂದಿಗೆ ಮಾತನಾಡಿದ ಒಡಿಯೂರು ಶ್ರೀಗಳು “ದ್ವೇಷ ಅನ್ನುವಂತದಿದ್ದರೆ ಕೊಲೆ ಅದಕ್ಕೆ ಪರಿಹಾರವಲ್ಲ, ಪ್ರವೀಣ್ ಕುಟುಂಬಕ್ಕಾದ ಪರಿಸ್ಥಿತಿ ಮತ್ಯಾರಿಗೂ ಬರಬಾರದು. ಮುಖ್ಯಮಂತ್ರಿಗಳೇ ಮನೆಗೆ ಭೇಟಿ ನೀಡಿರುವುದರಿಂದ ನ್ಯಾಯ ದೊರೆಯುವ ಭರವಸೆಯಿದೆ’ ಎಂದರು. ಕೆ.ಎಂ.ಎಫ್ ಉಪಾಧ್ಯಕ್ಷ ಜಯರಾಮ.ರೈ ಬಳೆಜ್ಜ ಹಾಗೂ ಸ್ವಾಮೀಜಿಯವರ ಭಕ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here