ಪುತ್ತೂರು: ಯುವ ಉದ್ಯಮಿ, ಗೆಜ್ಜೆಗಿರಿ ಕ್ಷೇತ್ರದ ಪ್ರಸಾದ ತಯಾರಿಕ ಘಟಕದ ಸಂಚಾಲಕ ಪ್ರವೀಣ್ ನೆಟ್ಟಾರುರವರಿಗೆ ಗೆಜ್ಜೆಗಿರಿಯ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲ ಸ್ಥಾನ ನಂದನ ಬಿತ್ತಿಲ್ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ ಪ್ರವೀಣರವರ ಕೆಲಸ-ಕಾರ್ಯಗಳ ಬಗ್ಗೆ ತಿಳಿಸಿದರು. ಗೆಜ್ಜೆಗಿರಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಪಿತಾಂಬರ ಹೇರಾಜೆ, ಪ್ರಧಾನ ಕಾರ್ಯದರ್ಶಿ ಡಾ. ರಾಜಶೇಖರ್ ಕೋಟ್ಯಾನ್ ಮಾತನಾಡಿ ನುಡಿನಮನ ಸಲ್ಲಿಸಿದರು.
ಗೌರವಾಧ್ಯಕ್ಷ ಜಯಂತ್ ನಡುಬೈಲು, ಕೋಶಾಧಿಕಾರಿ ಚಂದ್ರಹಾಸ ಉಚ್ಚಿಲ್, ಕಾರ್ಯದರ್ಶಿ ಗೋಪಿನಾಥ್ ಬಗಂಬಿಲ, ಧನಂಜಯ, ಸದಾನಂದ ಪೂಜಾರಿ ಬರಿಮಾರ್, ದೀಪಕ್ ಸಜಿಪ, ಪುರುಷೋತ್ತಮ ಕುಪ್ಪೆಪದವು, ಶಶಿಧರ್ ಕಿನ್ನಿಮಜಲು, ಭಾಸ್ಕರ ಸಾಲಿಯಾನ್ ಮುಂಬೈ,ಸೂರ್ಯಕಾಂತ ಸುವರ್ಣ ಮುಂಬೈ, ಚಂದ್ರಕಾಂತ ಶಾಂತಿವನ ಮುಂತಾದವರು ಉಪಸ್ಥಿತರಿದ್ದರು.