ಕಾವು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾವು ಇದರ ನೇತೃತ್ವದಲ್ಲಿ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ಸಭಾ ಭವನದಲ್ಲಿ ನಡೆಯುವ 39 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯಂದು ನಡೆಸುವ ಕ್ರೀಡಾಕೂಟ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಾಲಯದ ವಠಾರದಲ್ಲಿ ಜು 31 ರಂದು ನಡೆಯಿತು.
ಈ ಸಂದರ್ಭದಲ್ಲಿ ಕಾವು ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ,ಗೌರವ ಸಲಹೆಗಾರರಾದ ಚಂದ್ರಶೇಖರ ರಾವ್ ನಿಧಿಮುಂಡ,ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ, ಜೊತೆ ಕಾರ್ಯದರ್ಶಿ ರಾಮಣ್ಣ ನಾಯ್ಕ ಆಚಾರಿಮೂಲೆ,ಸದಸ್ಯರಾದ ಲೋಕೇಶ್ ಚಾಕೋಟೆ, ಯೋಗೀಶ್ ಹೊಸಮನೆ, ಧನಂಜಯ ಕುಂಞಕುಮೇರು, ಶಿವಕುಮಾರ ಮಾಣಿಯಡ್ಕ, ಗಣಪಯ್ಯ ಗೌಡ ಮಂಜಲ್ತಡ್ಕ ,ಚಂದ್ರಶೇಖರ ಕೆ, ಮಹೇಶ ಹೊಸಮನೆ, ಭಾಸ್ಕರ ನಾಯ್ಕ ಮಾಣಿಯಡ್ಕ, ಸಂದೇಶ್ ಚಾಕೋಟೆ,ನಿರಂಜನರಾವ್ ಕಮಲಡ್ಕ ,ದೇವಿಶ್ ರೈ ,ಜಗನ್ನಿವಾಸ ಗೌಡ ನಿಧಿಮುಂಡ, ರವಿಕಿರಣ ಕಾವು,ಉಮೇಶ್ ಮಾಡನ್ನೂರು, ಸುಂದರ ಪಿ, ವಿಶ್ವನಾಥ ಬಾಳೆಕೊಚ್ಚಿ,ವೆಂಕಪ್ಪ ಮೂಲ್ಯ ಕಾವು, ನಾರಾಯಣ ಮುಖಾರಿ,ಸೀತಾರಾಮ ಬಿ, ಯೋಗೀಶ್ ಕಾವು,ಶಿವಪ್ಪ ನಾಯ್ಕ ಉಪಸ್ಥಿತರಿದ್ದರು.