ಗೋಕುಲನಗರ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ: ಅಧ್ಯಕ್ಷ; ಪ್ರಕಾಶ್ ಕೆಮ್ಮಾರ, ಪ್ರಧಾನ ಕಾರ್ಯದರ್ಶಿ: ಯೋಗೀಶ ಎ

0

ರಾಮಕುಂಜ: ಕಡಬ ತಾಲೂಕು ಕೊಯಿಲ-ರಾಮಕುಂಜ 40ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾಗಿ ಪ್ರಕಾಶ್ ಕೆ.ಆರ್.ಕೆಮ್ಮಾರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಯೋಗೀಶ ಎ. ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಗೋಕುಲನಗರದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಪಿ.ಉದಯಕಶ್ಯಪ್, ಗೌರವ ಕಾರ್ಯದರ್ಶಿಯಾಗಿ ಪುರುಷೋತ್ತಮ ಕೆ., ಉಪಾಧ್ಯಕ್ಷರಾಗಿ ಜಗದೀಶ ಪಿ., ಜೊತೆ ಕಾರ್ಯದರ್ಶಿಯಾಗಿ ಗಣೇಶ ಕೇದಗೆದಡಿ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಕೆಮ್ಮಾರ, ಕ್ರೀಡಾ ಕಾರ್ಯದರ್ಶಿಯಾದಿ ದಿವಾಕರ ಕಂಪ, ಕ್ರೀಡಾ ಜೊತೆ ಕಾರ್ಯದರ್ಶಿಯಾಗಿ ಸುದರ್ಶನ್ ಗೌಡ ಕೇದಗೆದಡಿ, ಸಮಿತಿ ಸಂಚಾಲಕರಾಗಿ ಮನಮೋಹನ ಪಿ., ದಯಾನಂದ ರಾವ್ ನೀರಾಜೆ, ಶ್ರೀಷಕುಮಾರ್ ಕೆಮ್ಮಾರ ಆಯ್ಕೆಗೊಂಡರು. ಆ.18ರಂದು ಕೊಯಿಲ ಗೋಕುಲನಗರದಲ್ಲಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ೪೦ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವ ಆಚರಿಸಲು ನಿರ್ಧರಿಸಲಾಯಿತು.

LEAVE A REPLY

Please enter your comment!
Please enter your name here