ಅಧ್ಯಕ್ಷ: ಭಾಸ್ಕರ ಗೌಡ ಒಡ್ಯೆತ್ತಡ್ಕ, ಪ್ರಧಾನ ಕಾರ್ಯದರ್ಶಿ: ಹರೀಶ್ ಶೆಟ್ಟಿ ನೇರ್ಲ, ಉಪಾಧ್ಯಕ್ಷ: ಸಂತೋಷ್ ಗೌಡ ನೇರ್ಲ, ಕೋಶಾಧಿಕಾರಿ: ದಿವ್ಯೇಶ್ ಕಲ್ಯ
ನೆಲ್ಯಾಡಿ: ಇಚ್ಲಂಪಾಡಿ ನೇರ್ಲದಲ್ಲಿ ನಡೆಯುವ 10ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ ಎಸ್.ಗೌಡ ಒಡ್ಯೆತ್ತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಶೆಟ್ಟಿ ನೇರ್ಲ ಆಯ್ಕೆಗೊಂಡಿದ್ದಾರೆ.
ನೇರ್ಲದಲ್ಲಿ ನಡೆದ ಗಣೇಶೋತ್ಸವ ಸಮಿತಿ ಪೂರ್ವಭಾವಿ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಸಂತೋಷ್ ನೇರ್ಲ, ಕೋಶಾಧಿಕಾರಿಯಾಗಿ ದಿವ್ಯೇಶ್ ಕಲ್ಯ, ಜೊತೆ ಕಾರ್ಯದರ್ಶಿಯಾಗಿ ಮೋಹನ್ ಮುಚ್ಚಿಲ, ಸದಸ್ಯರುಗಳಾಗಿ ವಿಶ್ವನಾಥ ಗೌಡ ಕೊರಮೇರು, ದಿನಕರ ಶೆಟ್ಟಿ ಹೊಸಮನೆ, ವಿಖ್ಯಾತ್ ತಿಮರಡ್ಡ, ಕೀರ್ತನ್ ಕುಂಞಿಮಾರ್, ಸಲಹಾ ಸಮಿತಿ ಸದಸ್ಯರಾಗಿ ರಾಧಾಕೃಷ್ಣ ಗೌಡ ಕೆರ್ನಡ್ಕ, ರುಕ್ಮಯ ಗೌಡ ಕೊರಮೇರು, ಮೋನಪ್ಪ ಶೆಟ್ಟಿ ಹೊಸಮನೆ ಆಯ್ಕೆಯಾದರು.
ವಿವಿಧ ಸಮಿತಿ ಸಂಚಾಲಕರಾಗಿ ಆರ್ಥಿಕ ಸಮಿತಿ- ಹರೀಶ್ ಗೌಡ ನೇರ್ಲ, ಬೋಜನ ಸಮಿತಿ-ಶಾಂತರಾಮ ಕುಡಾಲ, ಪೂಜಾ ಸಮಿತಿ- ಪೂವಪ್ಪ ಗೌಡ ಪುಳಿತ್ತಡಿ, ಪ್ರಚಾರ ಸಮಿತಿ-ಲೋಕೇಶ್ ಶೆಟ್ಟಿ ನೇರ್ಲ, ಹರೀಶ್ ಅಲೆಕ್ಕಿ, ಅಲಂಕಾರ ಸಮಿತಿ- ಅಧ್ಯಕ್ಷರು ಶ್ರೀ ಧ.ಗ್ರಾ.ಯೋ.ಇಚ್ಲಂಪಾಡಿ ಒಕ್ಕೂಟ, ಗ್ರಾಮಾಲಂಕಾರ-ಪುರುಷೋತ್ತಮ ಒಡ್ಯೆತ್ತಡ್ಕ, ಸ್ವಯಂ ಸೇವಕ ಸಮಿತಿ-ವಸಂತ ಗೌಡ, ಮಾಧವ, ಶೋಭಾಯಾತ್ರೆ-ಗಣೇಶ್ ಕುಲಾಲ್ ಅಲೆಕ್ಕಿ, ವಾಹನ ವ್ಯವಸ್ಥೆ-ಭಾಸ್ಕರ ಪದಕ, ರಾಮಚಂದ್ರ ಪದಕ, ನೀರಾವರಿ-ಉಮೇಶ್ ಪೂಜಾರಿ ಮುಚ್ಚಿಲ, ಸಭಾ ಕಾರ್ಯಕ್ರಮ ನಿರ್ವಹಣೆ-ರವೀಂದ್ರ ಬಿಜೇರು, ಸ್ವಚ್ಛತಾ ಸಮಿತಿ-ಕೃಷ್ಣಪ್ಪ ಗೌಡ ಒಡ್ಯೆತ್ತಡ್ಕ, ಮೋಹನ ಕೆರ್ನಡ್ಕ ಆಯ್ಕೆಗೊಂಡರು.