ಪುತ್ತೂರು : ಇತ್ತಿಚೆಗೆ ಸುರಿಯುತ್ತಿದ್ದ ಮಳೆಗೆ ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗದ್ದೆ ಜನತಾ ಕಾಲೋನಿ ನಿವಾಸಿ ಐತ್ತಪ್ಪ ನಾಯ್ಕರವರ ಮನೆಯ ಛಾವಣಿ ಕುಸಿದಿದ್ದು ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಮನೆ ರಿಪೇರಿಗೆ ಹಣ ಬಿಡುಗಡೆಗೊಂಡಿತ್ತು.
ಅರಿಯಡ್ಕ ಗ್ರಾಮ ಪಂಚಾಯತ್, ಅರಿಯಡ್ಕ ಮರಾಠಿ ಸಂಘ ಮತ್ತು ಪೆರುವಾಜೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಹಕಾರದೊಂದಿಗೆ ಮನೆಯ ಛಾವಣಿಯನ್ನು ಸುವ್ಯವಸ್ಥಿತವಾಗಿ ರಿಪೇರಿ ಮಾಡಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಪಂಚಾಯತ್ ಸದಸ್ಯ ನಾರಾಯಣ ನಾಯ್ಕ ಚಾಕೋಟೆ, ಮರಾಠಿ ಸಂಘದ ಗ್ರಾಮ ಸಮಿತಿ ಸದಸ್ಯರಾದ ಶೇಷಪ್ಪ ನಾಯ್ಕ ಮಾಯಿಲಕೊಚ್ಚಿ, ಅಪ್ಪಯ್ಯ ನಾಯ್ಕ ಬಪ್ಪಂಡೇಲು, ದಿನೇಶ್ ನಾಯ್ಕ ಬಪ್ಪಂಡೇಲು, ಭರತ್ ಹೊಸಗದ್ದೆ, ವಸಂತ ನಾಯ್ಕ ಪೆರ್ನುಕು, ದೇವಪ್ಪ ನಾಯ್ಕ ಪೆರ್ನುಕು, ಶಂಕರ ನಾಯ್ಕ ಪೆರ್ನುಕು, ರಘುನಾಥ ನಾಯ್ಕ ಪೆರ್ನುಕು, ಕೃಷ್ಣಪ್ಪ ನಾಯ್ಕ ಬಪ್ಪಂಡೇಲು ಮತ್ತು ಆನಂದ ನಾಯ್ಕ ಕಾಟುಕುಕ್ಕೆ ಉಪಸ್ಥಿತರಿದ್ದರು