ಶಾಂತಿನಗರ ಸರಕಾರಿ ಪ್ರೌಢಶಾಲಾ ಶಿಕ್ಷಕಿ ಗೀತಾರವರಿಗೆ ಭಡ್ತಿ

0

ಬಂಟ್ವಾಳದ ಅಜ್ಜಿಬೆಟ್ಟು ಪ್ರೌಢಶಾಲೆಗೆ ಮುಖ್ಯ ಶಿಕ್ಷಕರಾಗಿ ವರ್ಗಾವಣೆ

ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ‌ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದ ಗೀತಾ ಎ.ರವರು ಮುಖ್ಯ ಶಿಕ್ಷಕಿಯಾಗಿ ಭಡ್ತಿ ಹೊಂದಿ‌ ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಸರಕಾರಿ‌ ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.‌

1994ರ ಸೆಪ್ಟೆಂಬರ್ 20ರಂದು ಮಂಗಳೂರು ಚೇಳ್ಯಾರುಪದವು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಸರಕಾರಿ ಸೇವೆ ಆರಂಭಿಸಿದ್ದ ಗೀತಾರವರು 1995ರ ಜೂನ್ 9ರಂದು ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕರಾಗಿ ಕರ್ತವ್ಯಕ್ಕೆ‌ ಹಾಜರಾಗಿದ್ದರು. ಇಲ್ಲಿ 27 ವರ್ಷ ಸೇವೆ ಸಲ್ಲಿಸಿದ ಇವರು ಇದೀಗ ಮುಖ್ಯ ಶಿಕ್ಷಕರಾಗಿ ಭಡ್ತಿ‌ ಪಡೆದು ಅಜ್ಜಿಬೆಟ್ಟು ಪ್ರೌಢಶಾಲೆಗೆ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ನೆಹರೂನಗರದ ಆನಂದ ಭವನ ಹೊಟೇಲ್‌ ಮಾಲಕರಾಗಿದ್ದ ಆನಂದ ಮತ್ತು ರತ್ನಾವತಿರವರ ಪುತ್ರಿಯಾದ ಗೀತಾ ಎ.ರವರು ಪ್ರಸ್ತುತ ನೆಹರೂನಗರದಲ್ಲಿ ಪತಿ ಶಂಕರ್, ಮಕ್ಕಳಾದ ಸಿಂಧೂರ, ಕುಂಕುಮ ಮತ್ತು ಚಂದನಾರವರೊಂದಿಗೆ ವಾಸವಿದ್ದಾರೆ.

LEAVE A REPLY

Please enter your comment!
Please enter your name here