ಹರ್‌ಘರ್ ತಿರಂಗ ಕಾರ್ಯಕ್ರಮ-`ಸುದ್ದಿ’ಯಿಂದ ತಾಲೂಕಿನ ಸ್ವಾತಂತ್ರ್ಯೋತ್ಸವದ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ, ಸಹಭಾಗಿತ್ವ

0

 

ಕಳೆದ ವರ್ಷ ಆಗಸ್ಟ್ 15 ರಂದು ಸುದ್ದಿ ಮಾಧ್ಯಮದಿಂದ ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನಲ್ಲಿ ಮನೆ ಮನೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಕರೆ ನೀಡಲಾಗಿತ್ತು. ತಾಲೂಕಿನ ಜನ ಮೆಚ್ಚಿದ ಅಧಿಕಾರಿಗಳನ್ನು ಜನರ ಓಟಿನ ಮೂಲಕ ಆಯ್ಕೆ ಮಾಡಲಾಗಿತ್ತು. ಈ ವರ್ಷ ಮನೆ ಮನೆಯಲ್ಲಿ ಮತ್ತು ಊರಿನಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮದೊಂದಿಗೆ ಸ್ವಾತಂತ್ರ್ಯದ ನಡಿಗೆ (ಮೆರವಣಿಗೆ). ಸ್ವಾತಂತ್ರ್ಯದ ಮತ್ತು ಲಂಚ, ಭ್ರಷ್ಟಾಚಾರ ಮುಕ್ತ ಊರಿನ ಘೋಷಣೆ, ಉತ್ತಮ ಸೇವೆಗೆ ಪುರಸ್ಕಾರ ಕಾರ್ಯಕ್ಕೆ ಕರೆ ನೀಡಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ಮೂರು ದಿನಗಳ ಕಾಲ ಹಗಲು-ರಾತ್ರಿ ರಾಷ್ಟ್ರಧ್ವಜ ಹಾರಾಟಕ್ಕೆ ಸರಕಾರ ಆದೇಶ ನೀಡಿದೆ. ಈ ಕಾರ್‍ಯಕ್ರಮಕ್ಕೆ ಮತ್ತು ತಾಲೂಕಿನಲ್ಲಿ, ಗ್ರಾಮ ಗ್ರಾಮಗಳಲ್ಲಿ, ಮನೆ ಮನೆಗಳಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆಯುವ ಎಲ್ಲರ ಮತ್ತು ಎಲ್ಲಾ ಕಾರ್ಯಕ್ರಮಗಳಿಗೆ ಸುದ್ದಿ ಮಾಧ್ಯಮ ಸಹಭಾಗಿತ್ವ ಮತ್ತು ಬೆಂಬಲ ನೀಡಲಿದೆ. -ಸುದ್ದಿ ಬಳಗ

LEAVE A REPLY

Please enter your comment!
Please enter your name here