ಮಂಗಳೂರು : ಮಂಗಳೂರಿನ ನ್ಯಾಯವಾದಿ ಸಿರಾಜುದ್ದೀನ್ ಎ. ರವರು 2022ರ ಸಾಲಿನ ನೇರ ನೇಮಕಾತಿಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.
ಕಳೆದ 16 ವರ್ಷಗಳಿಂದ ಮಂಗಳೂರಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಇವರು ಮಂಗಳೂರಿನ ಖ್ಯಾತ ನ್ಯಾಯವಾದಿಗಳಾದ ಅರುಣ್ ಬಂಗೇರ ಮತ್ತು ಅರುಣ್ ಕುಮಾರ್ ಶೆಟ್ಟಿಯವರ ಜೂನಿಯರ್ ನ್ಯಾಯಾವಾದಿಯಾಗಿ ಗುರುತಿಸಿಕೊಂಡಿದ್ದರು. ಮೂಲತ: ಬೆಳ್ತಂಗಡಿ ತಾಲೂಕಿನವರಾದ ಇವರು ಇಳಂತಿಲದ ಇದ್ದಿನಬ್ಬ ಬ್ಯಾರಿ ಮತ್ತು ಮೈಮುನ ದಂಪತಿ ಪುತ್ರರಾಗಿದ್ದು ಪುತ್ತೂರಿನ ವಿವೇಕಾನಂದ ಕಾನೂನು ಕಾಲೇಜ್ನಲ್ಲಿ ಕಾನೂನು ಪದವಿ, ಮಡಂತ್ಯಾರ್ನ ಸೆಕ್ರೆಡ್ ಹಾರ್ಟ್ ಕಾಲೇಜ್ನಲ್ಲಿ ಬಿ.ಎ. ಪದವಿ, ಪದ್ಮುಂಜದ ಸರಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ಪಿಯುಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉರುವಲುನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದಿದ್ದಾರೆ. ಇವರು ಮಂಗಳೂರು ಬಾರ್ ಅಸೋಸಿಯೇಶನ್ನ ಸದಸ್ಯರಾಗಿದ್ದಾರೆ.