ಸುಬ್ರಹ್ಮಣ್ಯ:ಮನೆ ಮೇಲೆ ಬರೆ ಜರಿದು ಮಕ್ಕಳು ಮೃತಪಟ್ಟ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

0

ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ರೆ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ:ಸುನಿಲ್ ಕುಮಾರ್

ಸುಬ್ರಹ್ಮಣ್ಯ: ಆ.1ರಂದು ರಾತ್ರಿ ಸುಬ್ರಹ್ಮಣ್ಯದಲ್ಲಿ ಮನೆ ಮೇಲೆ ಬರೆ ಜರಿದು ಸಂಭವಿಸಿದ ದುರ್ಘಟನೆಯಲ್ಲಿ ಮಕ್ಕಳಿಬ್ಬರು ದಾರುಣ ಸಾವಿಗೀಡಾಗಿದ್ದ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಭೇಟಿ ನೀಡಿದರು.

ಸುಬ್ರಹ್ಮಣ್ಯ ಕುಮಾರಧಾರದ ಬಳಿ ಕುಸುಮಾಧರ-ರೂಪಶ್ರೀ ದಂಪತಿ, ಮಕ್ಕಳು ವಾಸವಿದ್ದ ಮನೆಯ ಮೇಲೆ ಬರೆ ಜರಿದು ಬಿದ್ದು ಸಂಭವಿಸಿದ ದುರ್ಘಟನೆಯಲ್ಲಿ ಕುಸುಮಾಧರ ದಂಪತಿಯ ಪುತ್ರಿಯರಾದ ಶ್ರುತಿ(11ವ.) ಮತ್ತು ಜ್ಞಾನಶ್ರೀ(8ವ.)ಮಣ್ಣಿನಡಿ ಸಿಲುಕಿ ದಾರುಣವಾಗಿ ಸಾವಿಗೀಡಾಗಿದ್ದರು. ಈ ಮನೆಗೆ ಸಚಿವರು ಭೇಟಿ ನೀಡಿ ಮನೆಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದರು.

ಹಾನಿಗೀಡಾಗಿರುವ ಮನೆಗೆ ತುರ್ತು ಪರಿಹಾರವಾಗಿ ಈಗಾಗಲೇ 95 ಸಾವಿರ ರೂ.ನೀಡಿದ್ದೇವೆ.ಇನ್ನು ಮನೆ ಕಟ್ಟುವುದಿದ್ರೆ 4 ಲಕ್ಷ ರೂ.ಕೊಡಲಾಗುವುದು, ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದ್ರೆ ಹಣ ಕೊಡುವ ಪ್ರಾವಿಶನ್ ಇಲ್ಲ, ಆದರೂ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಘೋಷಣೆ ನೀಡಿ ಅಂಗಡಿಗಳಿಗೂ ಪರಿಹಾರ ನೀಡಲಿದ್ದೇವೆ ಎಂದು ಸಚಿವ ಸುನಿಲ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.,ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್, ಜಿ.ಪಂ ಸಿಇಒ ಡಾ|ಕುಮಾರ್, ಬಿಜೆಪಿಯ ಜಗದೀಶ್ ಶೇಣವ,ಸುಳ್ಯ ತಹಶಿಲ್ದಾರ್ ಅನಿತಾಲಕ್ಷ್ಮೀ,ಕಡಬ ತಹಶಿಲ್ದಾರ್ ಅನಂತಶಂಕರ,ಪುತ್ತೂರು-ಕಡಬ ತಾ.ಪಂ.ಕಾರ್ಯನಿರ್ವಾಹಕಾಽಕಾರಿ ನವೀನ್ ಭಂಡಾರಿ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಉಪವಲಯಾರಣ್ಯಾಽಕಾರಿ ಮಂಜುನಾಥ,ಕೊರಗಪ್ಪ ಹೆಗಡೆ,ಕಂದಾಯ ನಿರೀಕ್ಷಕ ಅವಿನ್ ರಂಗತ್‌ಮಲೆ, ಪಂಜ ಸೊಸೈಟಿ ಅಧ್ಯಕ್ಷ ಸುಬ್ರಹ್ಮಣ್ಯ ಕುಳ,ಸುಬ್ರಹ್ಮಣ್ಯ ಮೆಸ್ಕಾಂ ಸಹಾಯಕ ಅಭಿಯಂತರ ಚಿದಾನಂದ, ಪಂಜ ಮೆಸ್ಕಾಂನ ಹರಿವೆಂಕಟೇಶ ಶರ್ಮ, ಪಂಜ ಗ್ರಾ.ಪಂ.ಅಧ್ಯಕ್ಷೆ ಪೂರ್ಣಿಮಾ ದೇರಾಜೆ, ಸದಸ್ಯರಾದ ನಾರಾಯಣ ಕೃಷ್ಣನಗರ, ಚಂದ್ರಶೇಖರ ಪೆರಾಜೆ, ಲಿಖಿತ್ ಪಲ್ಲೋಡಿ, ಜಗದೀಶ್ ಕುರಿಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here