ಬೊಳುವಾರು ವಿಶ್ವಕರ್ಮ ಯುವ ಸಮಾಜ ; ಅಧ್ಯಕ್ಷ: ಕೆ. ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ: ಮಹೇಶ್ ಎಂ.

0

ಬೊಳುವಾರು: ಬೊಳುವಾರು ವಿಶ್ವಕರ್ಮ ಯುವ ಸಮಾಜದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಬೊಳುವಾರು ಜಿ.ಎಲ್. ಟ್ರೇಡ್‌ಸೆಂಟರ್‌ನಲ್ಲಿರುವ ಪವರ್‌ಸಾಫ್ಟ್ ಟೆಕ್ನಾಲಜೀಸ್ ಮಾಲಕ ಕೆ. ಪ್ರಕಾಶ್ ಆಚಾರ್ಯ ಹಾಗೂ ಕಾರ್ಯದರ್ಶಿಯಾಗಿ ಬೆಟ್ಟಂಪಾಡಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕ ಮಹೇಶ್ ಎಂ. ಆಯ್ಕೆಯಾದರು. ಸಂಘದ ಕೋಶಾಧಿಕಾರಿಯಾಗಿ ವಸಂತ ಆಚಾರ್ಯ ಬಿ., ಉಪಾಧ್ಯಕ್ಷರಾಗಿ ಹರೀಶ್ ಆಚಾರ್ಯ ಕೆ., ವಸಂತ್ ಆಚಾರ್ಯ ಉಕ್ಕುಡ, ಜತೆಕಾರ್ಯದರ್ಶಿಯಾಗಿ ಅಶೋಕ್ ಆಚಾರ್ಯ ನೆಲ್ಲಿಕಟ್ಟೆ, ಸಂಘಟನಾ ಕಾರ್ಯದರ್ಶಿಯಾಗಿ ಕಿಶನ್ ಬಿ.ವಿ., ಕ್ರೀಡಾ ನಿರ್ದೇಶಕರಾಗಿ ಕಿರಣ್ ಬಿ.ವಿ., ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಿವಾಸ ಆಚಾರ್ಯ ಪಡೀಲ್, ಪತ್ರಿಕಾ ವರದಿಗಾರರಾಗಿ ಆನಂದ ಆಚಾರ್ಯ ಅಜ್ಜಿನಡ್ಕ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರುಗಳಾಗಿ ರಮೇಶ್ ಆಚಾರ್ಯ ಮಾಮೇಶ್ವರ, ಎಸ್. ಭುಜಂಗ ಆಚಾರ್ಯ, ಎಸ್.ಎನ್. ಜಗದೀಶ್ ಆಚಾರ್ಯ ಮತ್ತು ಶ್ರೀಧರ ಆಚಾರ್ಯ ಕೊಕ್ಕಡ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಸುರೇಶ್ ಆಚಾರ್ಯ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಶ್ರೀಧರ ಆಚಾರ್ಯ ಕೊಕ್ಕಡ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here