ಕಿಲ್ಲೆಮೈದಾನದ 65ನೇ ವರ್ಷದ ಮಹಾಗಣೇಶೋತ್ಸವದ ವಿಗ್ರಹ ರಚನೆಗೆ ಮುಹೂರ್ತ, ಆಮಂತ್ರಣ ಪತ್ರ ಬಿಡುಗಡೆ

0

ವಿಗ್ರಹ ಮುಹೂರ್ತ

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ನಡೆಯುವ 65ನೇ ವರ್ಷದ ಮಹಾಗಣೇಶೋತ್ಸವದ ಶ್ರೀ ಗಣೇಶನ ವಿಗ್ರಹ ರಚನೆ ಮುಹೂರ್ತ ಆ.2ರಂದು ಕೋರ್ಟು ರಸ್ತೆಯ ವಿಶ್ವ ಸಂಕೀರ್ಣದಲ್ಲಿ ನಡೆಯಿತು. ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಆ.31 ರಿಂದ ಸೆ.6ರ ವರೆಗೆ ನಡೆಯುವ 65 ನೇವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಯಿತು. ಶ್ರೀ ದೇವತಾ ಸಮಿತಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿ, ಗೀತಾ ಎಸ್. ಶೆಟ್ಟಿ ನೆಲ್ಲಿಕಟ್ಟೆ, ಸಮಿತಿಯ ಪದಾಧಿಕಾರಿಗಳಾದ ಕಿಟ್ಟಣ್ಣ ಗೌಡ, ಸುದೇಶ್ ಕುಮಾರ್ ಚಿಕ್ಕಪುತ್ತೂರು, ವಸಂತ ನಾಯಕ್, ರಮೇಶ್ ಬನ್ನೂರು, ಸುದರ್ಶನ್ ಜೈನ್, ಸುರೇಂದ್ರ ನೆಹರುನಗರ, ಗಣಪತಿ ಪೈ, ಸತೀಶ್‌ ನಾಯ್ಕ್‌ ಪರ್ಲಡ್ಕ, ಈಶ್ವರ ಭಟ್ ಪಂಜಿಗುಡ್ಡೆ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ತುಳಸಿ ಕೆಟರರ‍್ಸ್‌ನ ಹರೀಶ್ ರಾವ್, ವಿಶ್ವಸಂಕೀರ್ಣದ ಮಾಲಕ ಕಮಲ್‌ ಜ್ಯುವೆಲ್ಲರ್ಸ್‌ ನ ಮಾಲಕ ದಾಮೋದರ್‌, ಉಮಾಶಂಕರ್‌ ನಾಯ್ಕ್‌, ಜಗನ್ನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಆಮಂತ್ರಣ ಪತ್ರಿಕೆ ಬಿಡುಗಡೆ

 

LEAVE A REPLY

Please enter your comment!
Please enter your name here