ಕಿಲ್ಲೆಮೈದಾನದ ಮಹಾಗಣೇಶೋತ್ಸವದ ಚಪ್ಪರ ಮುಹೂರ್ತ

0

ಚಪ್ಪರ ಮುಹೂರ್ತ

ಪುತ್ತೂರು: ಕಿಲ್ಲೆ ಮೈದಾನದಲ್ಲಿ ಶ್ರೀ ದೇವತಾ ಸಮಿತಿ ಆಶ್ರಯದಲ್ಲಿ ನಡೆಯುವ 65ನೇ ವರ್ಷದ ಮಹಾಗಣೇಶೋತ್ಸವದ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವನ್ನು ಪುತ್ತೂರು ಕಿಲ್ಲೆ ಮೈದಾನದಲ್ಲಿ ಅ.4 ರಂದು ಬೆಳಿಗ್ಗೆ ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ಅವರು ಪೂಜಾ ವಿಧಿ ವಿಧಾನದ ಮೂಲಕ ನೆರವೇರಿಸಿದರು. ಶ್ರೀದೇವತಾ ಸಮಿತಿ ಅಧ್ಯಕ್ಷ ಎನ್ ಸುಧಾಕರ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳಾದ ಸುದೇಶ್ ಕುಮಾರ್ ಚಿಕ್ಕಪುತ್ತೂರು, ವಸಂತ ನಾಯಕ್,‌  ರಮೇಶ್ ಬನ್ನೂರು,‌ ಸುರೇಂದ್ರ ನಗರ, ಅಮಿತ್‌ ರಾಜ್‌, ಐತ್ತಪ್ಪ, ನಾಗೇಶ ಕೆಮ್ಮಿಂಜೆ, ಜಗನ್ನಾಥ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here