ಪುತ್ತೂರು: ನಾಥ ಪಂಥೀಯ ಜೋಗಿ ಸಮಾಜ ಪುತ್ತೂರು ಹಾಗೂ ಕರ್ನಾಟಕ ಜೋಗಿ ಸುಧಾರಕ ಸಂಘ ಮಂಗಳೂರು ಇದರ ಪದಾಧಿಕಾರಿಗಳು ಪ್ರವೀಣ್ ನೆಟ್ಟಾರು ಅವರ ಮನೆಗೆ ಭೇಟಿ ನೀಡಿ ಪತ್ನಿ, ಹೆತ್ತವರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಪರಿಹಾರ ಧನ ನೀಡಿದರು. ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಮಹಿಳಾ ಘಟಕದ ಅಧ್ಯಕ್ಷೆ ಸುನಂದಾ ಸುರೇಶ್, ಹೆಚ್ ಕೆ ಪುರುಷೋತ್ತಮ್, ಶ್ರ ವರದರಾಜ್, ಸಂತೋಷ್ ಕುಮಾರ್ ಜೋಗಿ ಮತ್ತು ನಾಥ್ ಪಾಂಥಿಯ ಜೋಗಿ ಸಮಾಜ ಪುತ್ತೂರಿನ ಅಧ್ಯಕ್ಷ ಮೋನಪ್ಪ ಪುರುಷ ಮತ್ತು ಇಂದಿರಾ ಉಪಸ್ಥಿತರಿದ್ದರು.